ತಾಕತ್‌ ಇದ್ರೆ ದಾವೂದ್ ಇಬ್ರಾಹಿಂನನ್ನು ಬಂಧಿಸಿ: ಪೊಲೀಸರಿಗೆ ರವಿ ಪೂಜಾರಿ ಸವಾಲು

ನೀವು ನನ್ನನ್ನು ಸುಲಭವಾಗಿ ಅರೆಸ್ಟ್ ಮಾಡಿದ್ದೀರಾ. ಆದ್ರೆ ದಾವೂದ್ ಇಬ್ರಾಹಿಂ ಕ್ರೈಂಗಳನ್ನು ಮಾಡುತ್ತಾ ಇನ್ನೂ ಆಕ್ಟಿವ್ ಆಗಿದ್ದಾನೆ. ತಾಕತ್ ಇದ್ರೆ ಆತನನ್ನು ಸೆರೆಹಿಡಿದು ತೋರಿಸಿ ಎಂದು ಪಾತಕಿ ರವಿ ಪೂಜಾರಿ ಪೊಲೀಸರಿಗೆ ಸವಾಲು ಹಾಕಿದ್ದಾನೆ.

ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ರವಿ ಪೂಜಾರಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಪೊಲೀಸರ ಭದ್ರತೆಯೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾನೆ.

ನಾನು ಈ ಹಿಂದೆ ಭೂಗತ ಲೋಕದಲ್ಲಿ ಆಕ್ವಿವ್ ವಾಗಿದ್ದೆ. ಆಗ ಬೆಂಗಳೂರು ಸೇರಿ ಹಲವೆಡೆ ಬೆದರಿಕೆ ಹಾಗೂ ಇತರ ಕೃತ್ಯ ನಡೆಸಿದ್ದು ಸತ್ಯ. ಆದರೆ, ಆಫ್ರಿಕದ ಸೆನೆಗಲ್ ಸೇರಿದ ಬಳಿಕ ನಾನು ಯಾವುದೇ ಕ್ರೈಂನಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.

ಅಲ್ಲದೆ ತನ್ನ ಮೇಲೆ ಸುಖಾ ಸುಮ್ಮನೆ ಬೇರೆ ಬೇರೆ ಕೇಸ್ ಗಳನ್ನ ಹಾಕಲಾಗುತ್ತಿದೆ ಎಂದು ಆರೋಪಿಸಿರುವುದಾಗಿ ತಿಳಿದುಬಂದಿದೆ.ಇನ್ನು ರವಿಪೂಜಾರಿ ಕೇರಳದಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪವಿದ್ದು, ಬಾಡಿ ವಾರೆಂಟ್ ಮೂಲಕ ರವಿ ಪೂಜಾರಿಯನ್ನು ವಿಚಾರಣೆಗೆ ಒಳಪಡಿಸಲು ಕೇರಳ ಪೊಲೀಸರು ಸಿದ್ಧತೆ ನಡೆಸಿಕೊಂಡಿದ್ದಾರೆ. ಎಸಿಎಂಎಂ ನ್ಯಾಯಾಲಯಕ್ಕೆ ಬಾಡಿ ವಾರೆಂಟ್ ಪಡೆಯಲು ಕೇರಳ ಪೊಲೀಸರು ಅರ್ಜಿ ಹಾಕಿದ್ದಾರೆ.


ಇದನ್ನೂ ಓದಿ: ಕೊರೊನಾ ನಡುವೆ ಹಕ್ಕಿಜ್ವರದ ಹಾವಳಿ; 36,000 ಬಾತುಕೋಳಿಗಳನ್ನು ಕೊಂದ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights