ಡಿ.21 ರವರೆಗೆ ಎನ್ಸಿಬಿಗೆ ಹಾಜರಾಗಲು ಸಮಯ ಕೋರಿದ ನಟ ಅರ್ಜುನ್ ರಾಂಪಾಲ್!
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ತನಿಖೆಯಲ್ಲಿ ಅರ್ಜುನ್ ರಾಂಪಾಲ್ ಅವರ ಹೆಸರು ಸೇರಿಕೊಂಡಿದೆ. ಈ ಮೊದಲು ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ತನಿಖೆಗೆ ಕರಿಸಲಾಗಿದ್ದು ಇಂದು ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಅರ್ಜುನ್ ಇಂದು ಎನ್ಸಿಬಿ ಮುಂದೆ ಹಾಜರಾಗಿರಲಿಲ್ಲ. ನಟ ಡಿಸೆಂಬರ್ 21 ರವರೆಗೆ ಸಮಯ ಕೇಳಿದ್ದಾರೆ.
ಅರ್ಜುನ್ ಮತ್ತು ಗರ್ಲ್ಫ್ರೈಂಡ್ ಗೇಬ್ರಿಯೆಲ್ಲಾಗೆ ಎನ್ಸಿಬಿ ಗ್ರಿಲ್ :-
ಈ ಮೊದಲು ನವೆಂಬರ್ 13 ರಂದು ಅರ್ಜುನ್ನನ್ನು ಎನ್ಸಿಬಿ ಪ್ರಶ್ನಿಸಿತ್ತು. ನಟನ ಗೆಳತಿ ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್ನನ್ನು ಎನ್ಸಿಬಿ ಅಧಿಕಾರಿಗಳು ಎರಡು ದಿನಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ನವೆಂಬರ್ 10 ರಂದು ಎನ್ಸಿಬಿ ಅಧಿಕಾರಿಗಳು ಅರ್ಜುನ್ ರಾಂಪಾ ಮನೆಯ ಮೇಲೆ ದಾಳಿ ನಡೆಸಿದ ನಂತರ ದಂಪತಿಯನ್ನು ಪ್ರಶ್ನಿಸಲಾಯಿತು. ಅರ್ಜುನ್ ಚಾಲಕನನ್ನು ಸಹ ಬಂಧಿಸಲಾಗಿದ್ದು, ಎನ್ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಗೇಬ್ರಿಯೆಲ್ಲಾ ಅವರ ಸಹೋದರ :-
ಗೇಬ್ರಿಯೆಲ್ಲಾ ಅವರ ಸಹೋದರ ಅಗಿಸಿಯಾಲೋಸ್ ಡೆಮೆಟ್ರಿಯಡ್ಸ್ ಅವರನ್ನು ಮತ್ತೊಂದು ಮಾದಕವಸ್ತು ಪ್ರಕರಣದಲ್ಲಿ ಏಜೆನ್ಸಿ ಬಂಧಿಸಿದೆ. ಎನ್ಸಿಬಿ ಗೇಬ್ರಿಯೆಲ್ಲಾ ಅವರ ಸಹೋದರ ಅಲ್ಪ ಪ್ರಮಾಣದ ಹಶಿಶ್ ಮತ್ತು ಆಲ್ಪ್ರಜೋಲಮ್ ಮಾತ್ರೆಗಳನ್ನು ವಶಪಡಿಸಿಕೊಂಡಿದೆ.