ಆಂಧ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲೋಕುಲ ಗಾಂಧಿ ನಿಧನ
ಆಂಧ್ರ ಪ್ರದೇಶದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕುಲ ಗಾಂಧಿ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾರೆ. ಡೆಂಗ್ಯೂಗೆ ತುತ್ತಾಗಿದ್ದ ಅವರು ವಿಶಾಖಪಟ್ಟಣಂನ ಕೆಜಿಎಚ್ ಆಸ್ಪತ್ರೆಯಲ್ಲಿ ಗಾಂಧಿ ಸಾವನ್ನಪ್ಪಿದ್ದಾರೆ ಎಂದು ಪಕ್ಷದ ಸದಸ್ಯರು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯ ಸಹ-ಉಸ್ತುವಾರಿ ಸುನಿಲ್ ದೇವಧರ್, ರಾಜ್ಯ ಮುಖ್ಯಸ್ಥ ಸೋಮು ವೀರರಾಜು, ಸಂಸದ ಜಿವಿಎಲ್ ನರಸಿಂಹರಾವ್, ರಾಜ್ಯ ಪ್ರಧಾನ ಕಾರ್ಯದರ್ಶಿ ವಿಷ್ಣು ವರ್ಧನ್ ರೆಡ್ಡಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಗಾಂಧಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಗಾಂಧಿ ಅವರು ಪಾದೆರು ಕ್ಷೇತ್ರದ ಕೊಯ್ಯೂರು ಮಂಡಲದ ಸರಬಣ್ಣಪಾಲೆಮ್ ಮೂಲದವರು. ಅವರು 1998 ರಲ್ಲಿ ಮದ್ರಾಸ್ ಐಐಟಿಯಿಂದ ಪದವಿ ಪಡೆದಿದ್ದರು. ಕುವೈತ್ ಮತ್ತು ಇತರ ದೇಶಗಳಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಜನಾಶೀರ್ವಾದ ಯಾತ್ರೆಯಲ್ಲಿ ಕುದುರೆಯ ಮೇಲೆ ಬಿಜೆಪಿ ಧ್ವಜದ ಚಿತ್ರಣ : ಮೇನಕಾ ಗಾಂಧಿ ಎನ್ಜಿಒದಿಂದ ದೂರು!