ಜಾಲತಾಣಿಗರಿಂದ ಅಜಿತ್ ಹನುಮಕ್ಕನವರ್ ಟ್ರೋಲ್; ಟ್ರೆಂಡಿಂಗ್ನಲ್ಲಿ “ಏಜೆಂಟ್ ಅಜಿತ್”
ಸಾಮಾಜಿಕ ಜಾಲತಾಣಿಗರು ಕನ್ನಡದ ಸುವರ್ಣ ನ್ಯೂಸ್ ಚಾನೆಲ್ನ ಮುಖ್ಯಸ್ಥರಾದ ಅಜಿತ್ ಹನುಮಕ್ಕವನರ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಏಜೆಂಟ್ ಅಜಿತ್ ಎಂಬ ಹ್ಯಾಶ್ ಟ್ಯಾಗ್ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ಆಗುತ್ತಿದೆ.
ಟ್ವಿಟರ್ನಲ್ಲಿ #Agent_Ajith ಎಂಬ ಹ್ಯಾಶ್ಟ್ಯಾಗ್ ಬಳಸಿ ಸುಮಾರು 11,500 ಟ್ವಿಟ್ಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ.
ಅನಿಲ್ ಕುಮಾರ್ ಎಂಬುವವರು ಟ್ವೀಟ್ ಮಾಡಿದ್ದು, “ನಿರುದ್ಯೋಗದ ಬಗ್ಗೆ ಚರ್ಚಿಸದ ಅಜಿತ್ಗೆ ನಾಚಿಕೆಯಾಗಬೇಕು. ಬಿಜೆಪಿಯ ಚಮಚಾಗಿರಿ” ಎಂದು ಬರೆದುಕೊಂಡಿದ್ದು, ಸುವರ್ಣ ಸುದ್ಧಿ ವಾಹಿನಿಯಲ್ಲಿ ಅಜಿತ್ ಹನುಮಕ್ಕನವರ್ ಚರ್ಚಿಸಲಾದ ಮತ್ತು ಪ್ರಸಾರವಾದ ಕಾರ್ಯಕ್ರಮಗಳ ಬಗ್ಗೆ ಒಂದು ಗ್ರಾಫ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ, ನಿರುದ್ಯೋಗ ಸಮಸ್ಯೆ, ರೈತರ ಆತ್ಮಹತ್ಯೆ, ಆರ್ಥಿಕ ಕುಸಿತ, ಚೀನಾ ಸಮಸ್ಯೆ, ಕೊರೊನಾ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಭಾರತದ ಗಡಿ ಆಕ್ರಮಣ ಮಾಡಿರುವ ಚೀನಾ ಸೇರಿದಂತೆ ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚಿಸಿಯೇ ಇಲ್ಲ ಎಂದು ತೋರಿಸಲಾಗಿದೆ. ಇನ್ನು ಇವರು ಚರ್ಚಿಸಿರುವ ವಿಷಯಗಳು, ಲಾಕ್ಡೌನ್ ಮುಂದೂಡಿಕೆ, ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ, ತಬ್ಲಿಘಿಗಳು, ವಿರೋಧ ಪಕ್ಷಗಳ ಕುರಿತು, ಜಿಮ್, ವಿದ್ಯಾರ್ಥಿಗಳು, 20 ಲಕ್ಷ ಕೋಟಿ ಪ್ಯಾಕೇಜ್, ಧರ್ಮ ಮತ್ತು ಧಾರ್ಮಿಕತೆ, ರಾಮಮಂದಿರದ ಬಗ್ಗೆ ಎಂದು ಗ್ರಾಫ್ ಹೇಳುತ್ತದೆ.
ಇದನ್ನೂ ಓದಿ: ಬಿಎಸ್ವೈ ಪುತ್ರನ ಮೇಲೆ ಭ್ರಷ್ಟಾಚಾರದ ಆರೋಪ : ಸುದ್ದಿ ಮಾಧ್ಯಮ ಮುಖ್ಯಸ್ಥರ ಮನೆ ಮೇಲೆ ಪೊಲೀಸ್ ದಾಳಿ!
ಆಟೋ ರಾಜ ಎಂಬ ಅಕೌಂಟ್ನಿಂದ ಟ್ವೀಟ್ ಮಾಡಲಾಗಿದ್ದು, ಕರ್ನಾಟಕದ ಗೋಧಿ ಮೀಡಿಯಾ ಬಿಜೆಪಿಯವರೊಂದಿಗೆ ಕೂಟ ನಡೆಸುತ್ತಿದೆ ಎಂದು ಬರೆದಿದ್ದಾರೆ.
https://twitter.com/AutoRaja1212/status/1315187749708726274?s=20
ಡಾ.ಭರತಶ್ರೀ ಎಂಬುವವರು ಚಿತ್ರವೊಂದನ್ನು ಟ್ವೀಟ್ ಮಾಡಿ, “ಇಂದಿನ ಮಾಧ್ಯಮಗಳ ಮುಖ” ಎಂದು ಬರೆದುಕೊಂಡಿದ್ದಾರೆ. ಈ ಚಿತ್ರವು ರಿಪಬ್ಲಿಕ್ ಟಿ.ವಿಯ ಮುಖ್ಯಸ್ಥರಾದ ಅರ್ನಾಬ್ ಗೋಸ್ವಾಮಿಯನ್ನು ಹೋಲುತ್ತಿದ್ದು, ಅವರು ಖಾಕಿ ಚಡ್ಡಿ ಹಾಕಿಕೊಂಡು ಕುಳಿತಿರುವಂತೆ ಎಡಿಟ್ ಮಾಡಲಾಗಿದೆ.
Face of media today.. @JurnoAjit
@suvarnanewstv #Agent_Ajith #ಏಜೆಂಟ್_ಅಜಿತ್ pic.twitter.com/oaursSuibS— Dr. Bharatashree V M (@Bharatashree) October 11, 2020
ಇನ್ನೂ ಸಾವಿರಾರು ಜನರು ಏಜೆಂಟ್ ಅಜಿತ್ ಎಂದು ಟ್ವೀಟ್ ಮಾಡಿದ್ದು, ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿಗೆ ಹೋಲಿಸಿದ್ದಾರೆ. ಇನ್ನೂ ಕೆಲವರು ಅಜಿತ್, ಬಿಜೆಪಿ ನಾಯಕರೊಂದಿಗೆ ಹೊಟೆಲ್ ಒಂದರಲ್ಲಿ ತೆಗೆದುಕೊಂಡಿರುವ ಚಿತ್ರಗಳನ್ನು ಹಾಕಿ, ಬಿಜೆಪಿಯ ಏಜೆಂಟ್ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ಇವರನ್ನು ಪೇಯ್ಡ್ ಮೆನ್ ಎಂದು ಕರೆದಿದ್ದಾರೆ.
ಇದನ್ನೂ ಓದಿ: “ಪಕ್ಷದಲ್ಲಿನ ಅತ್ಯಾಚಾರಿಗಳಿಗೆ ಟಿಕೆಟ್ ನೀಡಲಾಗಿದೆ” ಎಂದ ಕಾಂಗ್ರೆಸ್ ಕಾರ್ಯಕರ್ತೆಗೆ ಥಳಿತ…!