ರೈತ ಹೋರಾಟ ಬೆಂಬಲಿಸಿ ವರದಿ ಮಾಡಿದ ಪತ್ರಕರ್ತೆ; ABVP ಕಾರ್ಯಕರ್ತನಿಂದ ಅತ್ಯಾಚಾರ-ಕೊಲೆ ಬೆದರಿಕೆ!

ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ಸುದ್ದಿ-ವರದಿ ಮಾಡಿದ್ದಕ್ಕಾಗಿ ಹವ್ಯಾಸಿ ಮತ್ತು ಸ್ವತಂತ್ರ ಪತ್ರಕರ್ತೆ ರೋಹಿಣಿ ಸಿಂಗ್‌ ಅವರಿಗೆ ಅತ್ಯಾಚಾರ ಮತ್ತು ಕೊಲೆ ಮಾಡುವುದಾಗಿ ಬೆದರಿಕೆಯ ಸಂದೇಶ ಕಳಿಸಿದ್ದ ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಎಪಿವಿಪಿಯೊಂದಿಗೆ ಸಂಬಂಧ ಹೊಂದಿರುವ ಕಾನೂನು ವಿದ್ಯಾರ್ಥಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ಜನವರಿ 26 ರಂದು ರೈತರು ನಡೆಸಿದ್ದ ಟ್ರಾಕ್ಟರ್‌ ಪರೇಡ್‌ ಬಗ್ಗೆ ರೋಹಿಣಿ ಸಿಂಗ್‌ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ 26 ವರ್ಷದ ಕಪಿಲ್ ವಿಯಾನ್ ಎಂಬಾತ ಟ್ವೀಟರ್‌ನಲ್ಲೇ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಒಡ್ಡಿದ್ದಾನೆ ಎಂದು ದಿ ವೈರ್ ವರದಿ ಮಾಡಿದೆ.

ಆತನ ಬೆದರಿಕೆಯ ಸಂದೇಶಗಳನ್ನು ಉಲ್ಲೇಖಿಸಿ, ರೋಹಿಣಿ ಸಿಂಗ್ ಅವರು ಉದಯಪುರದ ಉನ್ನತ ಪೊಲೀಸರು ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಟ್ಯಾಗ್ ಮಾಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

ಅವರು ಟ್ವೀಟ್‌ಅನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಗೆಹ್ಲೋಟ್‌, ತಕ್ಷಣ ಕ್ರಮ ಕೈಗೊಳ್ಳುವಂತೆ ಉದಯಪುರ ಐಜಿ ಮತ್ತು ಎಸ್‌ಪಿಗೆ ಸೂಚನೆ ನೀಡಿದ್ದು, ಉದಯಪುರದ ಸೆಮಾರಿ ಗ್ರಾಮದ ನಿವಾಸಿಯಾಗಿದ್ದ ಕಪಿಲ್‌ ವಿನಯ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಉದಯಪುರ ವ್ಯಾಪ್ತಿಯ ಇನ್ಸ್ಪೆಕ್ಟರ್ ಜನರಲ್ ಸತ್ಯವೀರ್ ಸಿಂಗ್ ತಿಳಿಸಿದ್ದಾರೆ.

ರೈತರ ರ‍್ಯಾಲಿಯ ಬಗ್ಗೆ ರೋಹಿಣಿ ಸಿಂಗ್ ವರದಿ ಮಾಡಿರುವುದು ತನಗೆ ಕೋಪ ತಂದಿತ್ತು. ಹಾಗಾಗಿ ಬೆದರಿಕೆ ಸಂದೇಶ ಕಳಿಸಿದ್ದೆ ಎಂದು ವಿಯಾನ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

Read Also: ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿದ BJP ನಾಯಕರು; ಶೇಮ್‌ ಆನ್‌ ಬಿಜೆಪಿ ಎಂದ ಟಿಎಂಸಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights