ಕೋರಮಂಗಲದಲ್ಲಿ ಬೀದಿನಾಯಿ ಕಾಟ : 10 ಮಂದಿಗೆ ಗಾಯ! – ಪ್ರತಿಕ್ರಿಯಿಸದ ಬಿಬಿಎಂಪಿ!

ಇತ್ತೀಚೆಗೆ ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಕೋರಮಂಗಲದ 4ನೇ ಬ್ಲಾಕ್ನಲ್ಲಿ ಬೀದಿನಾಯಿಗಳ ದಾಳಿಗೆ 10 ಜನರಿಗೆ ಗಾಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೌದು.. ಒಂದೇ ದಿನದಲ್ಲಿ ಸುಮಾರು ಎಂಟರಿಂದ 10 ಜನರಿಗೆ ಹುಚ್ಚು ನಾಯಿಗಳು ಕಚ್ಚಿವೆ. ನಾಯಿ ದಾಳಿಗೆ ಬೇಸತ್ತ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿಗೆ ಕರೆ ಮಾಡಿ ಮಾಹಿತಿ ನೀಡಿದರೂ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಚಿಕ್ಕವರಿಂದ ಹಿಡಿದು ವಯಸ್ಸಾದವರಿಗೂ ನಾಯಿ ಕಚ್ಚಿದೆ. ಇದರಲ್ಲಿ ಮೂರು ಜನರಿಗೆ ಗಭೀರವಾಗಿ ಗಾಯವಾಗಿದೆ. ಬೀದಿನಾಯಿಗಳಿಗೆ ಕಡಿವಾಣ ಹಾಕಬೇಕಾದ ಬಿಬಿಎಂಪಿಯೇ ಜನರಿಗೆ ಸರಿಯಾಗಿ ಪ್ರತಿಕ್ರಿಯೆ ನೀಡದೇ ಇದ್ದರೆ ಹೇಗೆ ಎಂದು ಜನ ಕಿಡಿ ಕಾರಿದ್ದಾರೆ. ಮೂರು ನಾಲ್ಕು ಜನಕ್ಕೆ ಕಾಲ್ ಮಾಡಿದರೂ ಸರಿಯಾಗಿ ಪ್ರತಿಕ್ರಿಯಿಸಿದ ಬಿಬಿಎಂಪಿ ವಿರುದ್ಧ ಜನ ಹಿಡಿ ಶಾಪ ಹಾಕುತ್ತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights