ವಿಶ್ವನಾಥ್‌ ಚುನಾವಣೆಗೆ ಸ್ಪರ್ಧಿಸಬೇಡಿ ಎಂದರೂ ಕೇಳಲಿಲ್ಲ; ಅತ್ತ MLAಯೂ ಆಗಲಿಲ್ಲ, ಇತ್ತ MLCಯೂ ಆಗಲಿಲ್ಲ: ಭೈರತಿ ಬಸವರಾಜ್

ವಿಧಾನಸಭೆ ಉಪಚುನಾವಣೆಗೆ ಸ್ಪರ್ಧಿಸಬೇಡಿ ಅಂತ ಹೇಳಿದ್ರೂ ವಿಶ್ವನಾಥ್‌ ಕೇಳಲಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.  ಅದೇ ಕಾರಣಕ್ಕೆ ಈಗ ವಿಧಾನ ಪರಿಷತ್ ಸ್ಥಾನವೂ ಸಿಗಲಿಲ್ಲ. ಅತ್ತ MLAಯೂ ಆಗಲಿಲ್ಲ, ಇತ್ತ MLCಯೂ ಆಗಲಿಲ್ಲ ಎಂದು ಭೈರತಿ ಬಸವರಾಜ್ ಹೇಳಿದ್ದಾರೆ.

ವಿಶ್ವನಾಥ್​​ಗೆ ವಿಧಾನ ಪರಿಷತ್ ಸ್ಥಾನ ತಪ್ಪಲು ಸ್ವತಃ ಅವರೇ ಕಾರಣ. ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಸಚಿವನನ್ನಾಗಿಸೋದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೂ ಅವರು ಕೇಳದೆ ನಾನು ಚುನಾವಣೆಗೆ ನಿಲ್ಲುತ್ತೇನೆ. ಗೆದ್ದು ಬರುತ್ತೇನೆ ಎಂದು ಹಠಕ್ಕೆ ಬಿದ್ದದ್ದರು ಎಂದು ತಿಳಿಸಿದ್ದಾರೆ.

ಅವರಿಗೆ ಯಡಿಯೂರಪ್ಪ ಟಿಕೆಟ್ ಕೊಟ್ಟರೂ ವಿಶ್ವನಾಥ್ ಗೆಲ್ಲಲಿಲ್ಲ, ಇದೀಗ ವಿಧಾನ ಪರಿಷತ್ ಸದಸ್ಯರಾಗಿಯೂ ಆಯ್ಕೆಯಾಗಿಲ್ಲ. ಉಪ ಚುನಾವಣೆ ವೇಳೆ ಸ್ಪರ್ಧಿಸುವುದು ಬೇಡ ಎಂದರೂ ಕೇಳಲಿಲ್ಲ. ಬೇರೆಯವರನ್ನು ನಿಲ್ಲಿಸಿ, ಗೆಲ್ಲಿಸಿ ಅಂತ ಯಡಿಯೂರಪ್ಪ ಹೇಳಿದರೂ ವಿಶ್ವನಾಥ್ ಒಪ್ಪಲಿಲ್ಲ ಎಂದರು.

ಚುನಾವಣೆಗೆ ನಿಂತು ಗೆಲ್ಲುತ್ತೇನೆ ಅಂದವರು ಸೋತರು. ವಿಧಾನ ಪರಿಷತ್ ಆಯ್ಕೆ ಮಾಡುವಂತೆಯೂ ನಾವೆಲ್ಲಾ ಕೇಳಿದ್ದೆವು. ಆದರೆ ಹೈಕಮಾಂಡ್ ಒಪ್ಪಲಿಲ್ಲ. ಮುಂದೆ ಹೈಕಮಾಂಡ್ ಏನು ಮಾಡುತ್ತೆ ಅಂತ ಕಾದು ನೋಡುತ್ತೇವೆ ಎಂದರು.

ನೂತನ ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡೋ ವಿಚಾರದ ಕುರಿತು ಪ್ರತಿಕ್ರಿಯಿಸಿದ ಭೈರತಿ, ಯಾರಿಗೆ ಸಚಿವ ಸ್ಥಾನ ಕೊಡಬೇಕೆನ್ನೋದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಅವರು ಯಾರಿಗೆ ಸಚಿವ ಸ್ಥಾನ ಕೊಟ್ಟರೂ ನಾವೆಲ್ಲಾ ಅದನ್ನು ಒಪ್ಪಿಕೊಳ್ಳುತ್ತೇವೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights