ಲಿಂಗಾಯತರೆಲ್ಲ ಬಿಎಸ್ವೈ ನೋಡಿ ವೋಟ್ ಹಾಕಿದ್ದಾರೆ : ಬಿಎಸ್ ವೈ ಪರ ‘ಕೈ’ ಮುಖಂಡ ತಿಮ್ಮಾಪುರ ಬ್ಯಾಟಿಂಗ್…
ರಾಜ್ಯದ ಲಿಂಗಾಯತರೆಲ್ಲರೂ ಬಿಎಸ್ವೈ ನೋಡಿ ಬಿಜೆಪಿಗೆ ವೋಟ್ ಹಾಕಿದ್ದಾರೆ. ಬಿಎಲ್ ಸಂತೋಷ, ಕಟೀಲ್ ನೋಡಿ ವೋಟ್ ಕೊಟ್ಟಿಲ್ಲ ಅನ್ನೋದು ಜನತೆಗೆ ಸ್ಪಷ್ಟವಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಈ ಭಾಗದಲ್ಲಿ ಯಾರಿಗೂ ಪರಿಚಯವಿಲ್ಲ. ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ ಎಂದು ಜನ ಪೇಪರ್ ನಲ್ಲಿ ಬರುವದನ್ನು ನೋಡ್ತಾರೆ. ಬಿಜೆಪಿ ಅಂದ್ರೆ ಯಡಿಯೂರಪ್ಪ ಅನ್ನೋದಷ್ಟೆ ಗೊತ್ತಿದೆ ಎಂದು ಬಿಎಸ್ ವೈ ಪರ ಕಾಂಗ್ರೆಸ್ ಮುಖಂಡ ಆರ್.ಬಿ ತಿಮ್ಮಾಪುರ ಬ್ಯಾಟಿಂಗ್ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ತಮ್ಮಾಪುರ, ನಮ್ಮಲ್ಲಿ ಲಿಂಗಾಯತರು ಕಾಂಗ್ರೆಸ್ ನಲ್ಲಿದ್ದಾರೆ. ಮೆಜಾರಿಟಿ ಲಿಂಗಾಯತರು ಬಿಎಸ್ವೈಯವ್ರನ್ನು ನಾಯಕರೆಂದು ಒಪ್ಪಿಕೊಂಡಿದ್ದಾರೆ. ಬಿಎಸ್ವೈ ಲಿಂಗಾಯತ ನಾಯಕನ್ನೆ ಮುಗಿಸುವ ಕುತಂತ್ರ ಬಿಜೆಪಿಯಲ್ಲಿ ನಡೀತಿದೆ.
ಲಿಂಗಾಯತರಿಗೆ ಇದೆಲ್ಲಾ ತಿಳಿಯುತ್ತಿದೆ ಅಂತ ಅನಿಸ್ತಿದೆ. ಯಾಕೆಂದರೆ ಲಿಂಗಾಯತರು ಪತ್ರ ಬರೆದಿದ್ದಾರೆ. ನೀವು ಬಿ ಎಸ್ವೈಯನ್ನು ಮುಗಿಸೋಕೆ ಹೋದ್ರೆ ೧೩ಜಿಲ್ಲೆಯಲ್ಲಿ ರಾಜಿನಾಮೆ ಕೊಡ್ತೀವಿ ಎಂದಿದ್ದಾರೆಂದು ಮಾಧ್ಯಮದಲ್ಲಿ ನೋಡಿದೆ. ಬಿಜೆಪಿಗೆ ಅರಿವು ಆಗಿದೆ,ತಕ್ಕ ಪಾಠ ಕಲಿತಾರೆ ಎಂದಿದ್ದಾರೆ.