‘ಯಡಿಯೂರಪ್ಪಗೆ ಕೇವಲ ಅಧಿಕಾರದ ಆಸೆ’ – ಸಿಎಂ ವಿರುದ್ದ ಏಕವಚನದಲ್ಲಿ ಹರಿಹಾಯ್ದ ಮಾಜಿ ಸಚಿವ ಜಮೀರ್ ಅಹ್ಮದ್
ಮಾಜಿ ಸಚಿವ ಜಮೀರ್ ಅಹ್ಮದ್ ಸಿಎಂ ಹಿಂದೂ ಪರನೂ ಅಲ್ಲ ಮುಸ್ಲಿಂ ಪರನೂ ಅಲ್ಲ. ಯಡಿಯೂರಪ್ಪ ನವರ ಪ್ಯಾಂಟ್ ನ ಬಿಚ್ಚಿ ಚಡ್ಡಿ ನೋಡಿದರೆ ಆರ್ ಎಸ್ ಎಸ್ ಕಾಣಿಸುತ್ತದೆ. ಹೀಗಾಗಿ ಯಡಿಯೂರಪ್ಪನವರನ್ನ ನಂಬಬಾರದು ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಹರಿಹಾಯ್ದಿದ್ದಾರೆ.
ಸದ್ಯ ಈ ಭಾಷಣದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಸೆಂ 25 ರಂದು ಮುದೂಳ್ ನಗರದಲ್ಲಿ ಶಾದಿ ಮೊಹಲ್ ಉದ್ಘಾಟನೆ ವೇಳೆ ಸಿಎಂ ವಿರುದ್ಧ ಮಾತನಾಡಿದ್ದಾರೆ. ಸಿಎಂ ಯಡಿಯೂರಪ್ಪ ನವರ ವಿರುದ್ದ ಏಕವಚನದಲ್ಲಿ ಮಾತನಾಡಿದ್ದಾರೆ. ಶೋಭಾ ಕರಂದ್ಲಾಜೆ ಹಾಗೂ ಯಡಿಯೂರಪ್ಪ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದರು, ನಾನು ಆಗಲೇ ಹೇಳಿದ್ದೆ ಯಡಿಯೂರಪ್ಪನ್ನವರನ್ನ ನಂಬಬೇಡಿ ಎಂದು.
‘ಯಡಿಯೂರಪ್ಪಗೆ ಕೇವಲ ಅಧಿಕಾರದ ಆಸೆ’ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಸಿಎಂ ವಿರುದ್ದ ಕಿಡಿ ಕಾರಿದ್ದಾರೆ. ಯಡಿಯೂರಪ್ಪ ಪ್ಯಾಂಟ್ ನ ಬಿಚ್ಚಿ ಚಡ್ಡಿ ನೋಡಿದರೆ ಆರ್ ಎಸ್ ಎಸ್ ಕಾಣಿಸುತ್ತದೆ ಎಂದ ಏಕವಚನದಲ್ಲಿ ಮಾತನಾಡಿದ್ದಾರೆ.