ಕುಮಾರಸ್ವಾಮಿಗೂ ಹಾಸನ ಜಿಲ್ಲೆಗೂ ಏನು ಸಂಬಂಧ – ಮಾಧುಸ್ವಾಮಿ ಪ್ರಶ್ನೆ

ಇತ್ತೀಚೆಗೆ ಸಚಿವ ಜೆಸಿ ಮಾಧುಸ್ವಾಮಿ ವಿರುದ್ದ ಚಿಲ್ಲರೆ ರಾಜಕಾರಣ ಎಂದು ಕಿಡಿಕಾರಿದ್ದ  ಮಾಜಿ ಸಿಎಂ ಕುಮಾರಸ್ವಾಮಿಗೆ ಮಾದುಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿಗು ಹಾಸನ ಜಿಲ್ಲೆಗು ಏನು ಸಂಬಂಧ ಎಂದು ಮಾದುಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಹೆಚ್.ಡಿ ಕುಮಾರಸ್ವಾಮಿ ಹಾಸನ ಜಿಲ್ಲೆ ಬಿಟ್ಟು ಬಹಳ ದಿನಗಳೇ ಆಗಿದೆ.  ಈಗ್ಯಾಕೆ ಕುಮಾರಸ್ವಾಮಿ ಹಾಸನ ಜಿಲ್ಲೆ ಬಗ್ಗೆ ಮಾತಾಡ್ತಿದ್ದಾರೆ ಎಂದು ಕೋಲಾರದ ಶಿವಾರಪಟ್ಡಣ ಕೆರೆ ಬಳಿ ಮಾಧುಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ನಾನು ಚಿಲ್ಲರೆ ರಾಜಕೀಯ, ಹಾಗು ಕಾಟಾಚಾರಕ್ಕೆ ಹಾಸನ ಜಿಲ್ಲೆಗೆ ಭೇಟಿ ನೀಡಿಲ್ಲ. ನಾನು ಉಸ್ತುವಾರಿ ಸಚಿವ ಆದ ನಂತರ ಸಾಕಷ್ಟು ಗಮನಾರ್ಹ ಕೆಲಸ ಮಾಡಿದ್ದೇನೆ. ನಾನು ಸಚಿವನಾದ ನಂತರ ಯಾವುದೇ ಘರ್ಷಣೆಗೂ ಅವಕಾಶ ನೀಡದೆ , ಒಳ್ಳೆ ಕೆಲಸ ಮಾಡಿದ್ದೇನೆ ಎಂದರು.

ಸಿದ್ದರಾಮಯ್ಯ ತಮ್ಮ ಕ್ಷೇತ್ರದಲ್ಲಿ ಸೋತಿದ್ದಾರೆ, ಮೊದಲು ಸೋಲೊಪ್ಪಿಕೊಳ್ಳಲಿ. ಸಿದ್ದರಾಮಯ್ಯ ರಿಗೆ ಸರ್ಕಾರ ಬಿದ್ದೋಗುತ್ತೆ ಎನ್ನುವ ಭ್ರಮನಿರಸನವಾಗಿದೆ. ನಾನು ಸಿದ್ದರಾಮಯ್ಯ ಒಳ್ಳೆ ಸ್ನೇಹಿತರು. ಮ್ಯಾಂಡೇಟ್ ಮ್ಯಾಂಡೇಟ್ ಎನ್ನುತ್ತಾ ವಿತೌಡ್ ಮ್ಯಾಂಡೇಟ್ ಮಾತಾಡ್ತಿದ್ದಾರೆ. ಸರ್ಕಾರ ಧೃಡವಾಗಿಯೇ ಇದೆ,‌ ಸದ್ಯಕ್ಕೆ ನಾವು ಅವಧಿ ಪೂರ್ಣ ಮಾಡ್ತೀವಿ. ಮುಂದಿನ ಅವಧಿಗೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರೋ ನಿರೀಕ್ಷೆಯಿದೆ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights