‘ಅಂಬರೀಶ್ ದೇಹ ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಅಭಿಷೇಕ್ ಹೇಳಿದ್ದು ಕುಮಾರಸ್ವಾಮಿ ಅಲ್ಲ’ ರಾಕ್ ಲೈನ್ ವೆಂಕಟೇಶ್

ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಗಣಿ ವಾಕ್ಸಮರದಲ್ಲಿ ಬೇರೆ ಬೇರೆ ವಿಚಾರಗಳು ತಳುಕು ಹಾಕಿಕೊಳ್ಳುತ್ತಿದೆ. ಮಂಡ್ಯ ದಳಪತಿಗಳ ವಿರುದ್ಧ ಸಂಸದೆ ಸುಮಲತಾ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ವಾಗ್ದಾಳಿ ನಡೆಸಿದ್ದಾರೆ.

ಅಂಬರೀಶ್ ದೇಹ ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಅಭಿಷೇಕ್ ಹೇಳಿದ್ದು ಕುಮಾರಸ್ವಾಮಿ ಅಲ್ಲ ಎಂದು ರಾಕ್ ಲೈನ್ ವೆಂಕಟೇಶ್ ತಿರುಗೇಟು ಕೊಟ್ಟಿದ್ದಾರೆ. ನಟ ಅಂಬರೀಶ್ ನಿಧನರಾದ ಸಂದರ್ಭದಲ್ಲಿ ಮಂಡ್ಯಕ್ಕೆ ದೇಹವನ್ನು ತೆಗೆದುಕೊಂಡು ಹೋಗಲು ಸುಮಲತಾ ನಿರಾಕರಿಸಿದ್ದರು ಎನ್ನುವ ಮಾತು ಪದೇ ಪದೇ ಅಂಬರೀಶ್ ಹೇಳುತ್ತಲೇ ಇದ್ದಾರೆ. ಆದರೆ ಕುಮಾರಸ್ವಾಮಿ ಅವರ ಈ ಮಾತಿಗೆ ರಾಕ್ ಲೈನ್ ವೆಂಕಟೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಭಿಷೇಕ್ ‘ ಮಂಡ್ಯದ ಜನ ಅಪ್ಪನನ್ನು ಬೆಳಸಿದ್ದಾರೆ. ಅವರ ದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಬೇಕು’ ಎಂದು ಆಸೆ ಪಟ್ರು. ಸುಮಲತಾ ಕೂಡ ಇದಕ್ಕೆ ಒಪ್ಪಿಗೆ ನೀಡಿದರು. ಹೀಗಾಗಿ ಮಂಡ್ಯಕ್ಕೆ ಅಂಬರೀಶ್ ದೇಹ ತರಲಾಯಿತೇ ವಿನ: ಕುಮಾರಸ್ವಾಮಿ ಹೇಳಿದ್ರು ಅಂತಲ್ಲಾ ಎಂದಿದ್ದಾರೆ.

ನನಗೆ ನಟ ರಾಜಕುಮಾರ್ ಅವರ ಕಾಲದಿಂದಲೂ ಕುಮಾರಸ್ವಾಮಿ ಅವರು ಏನು ಅನ್ನೋದು ಗೊತ್ತಿದೆ. ಕುಮಾರಣ್ಣ ನೀವು ಒಳ್ಳೆಯವರು. ಒಳ್ಳೆಯದ್ದೇ ಮಾತನಾಡಿ. ಒಳ್ಳೆಯದ್ದೇ ಮಾಡಿ ಎಂದು ವೆಂಕಟೇಶ್ ಮನವಿ ಮಾಡಿಕೊಂಡರು. ಅಂಬರೀಶ್ ಅವರ ಬಗ್ಗೆ ಮಾತನಾಡಿದ್ದಕ್ಕೆ ಮಂಡ್ಯದ ಜನ ಪಾಠ ಕಲಿಸಿದ್ದಾರೆ ನಿಮ್ಗೆ. ಮತ್ತದೇ ತಪ್ಪು ಮಾಡಬೇಡಿ ಎಂದಿದ್ದಾರೆ.

ಯಾವ ಸಂದರ್ಭದಲ್ಲಿ ಯಾರು ಯಾರ ಬಗ್ಗೆನೂ ಮಾತನಡಬಹುದಾ..? ನಾವು ನಿಮ್ಮ ವೈಯಕ್ತಿಕ ವಿಚಾರವನ್ನು ಮಾತನಾಡಿಲ್ಲ. ಚಿತ್ರರಂಗದಿಂದ ನೀವು ಲಾಭ ಮಾಡಿಕೊಂಡಿದ್ದೀರಾ. ನಿಮ್ಮ ಕುಟುಂಬದಲ್ಲಿ ಕೆಲವರು ಚಿತ್ರರಂಗದಲ್ಲಿದ್ದಾರೆ. ಅದನ್ನ ನೀವು ಮರೆಯಬೇಡಿ ಎಂದು ಹೇಳಿದ್ದಾರೆ. ಅಂಬರೀಶ್ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದಿರಿ ಎನ್ನುವ ಮಾತನ್ನ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights