ಸಿಎಂ ಖಾತೆಗೆ ಕನ್ನ: ಸಿನಿಮಾ ನಿರ್ದೇಶಕ ಸೇರಿ 06 ಜನರ ಬಂಧನ!

ಆಂಧ್ರಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕನ್ನ ಹಾಕಲು ಹೀಗಿದ್ದ ಸಿನಿಮಾ ನಿರ್ದೇಶಕ ಉದಯ ಶೆಟ್ಟಿ ಕಾಂತಾವರ, ಮೂಡಬಿದಿರೆ ನಿವಾಸಿ ಯೋಗಿಶ್ ಆಚಾರ್ಯ, ಮಂಗಳೂರಿನ ಬ್ರಿಜೇಶ್ ರೈ, ಬೆಳ್ತಂಗಡಿಯ ಗಂಗಾಧರ್ ಸುವರ್ಣ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದ್ದು, ಇಬ್ಬರ ಹೆಸರು ಹೇಳಲು ಪೊಲೀಸರು ನಿರಾಕರಿಸಿದ್ದಾರೆ ಎನ್ನಲಾಗಿದೆ.

ನಕಲಿ ಚೆಕ್ ಬಳಿಸಿ 58 ಕೋಟಿ ರೂ. ಹಣ ವಿತ್​ ಡ್ರಾ ಮಾಡಲು ಇವರ ತಂಡ ಮುಂದಾಗಿತ್ತು. ನಕಲಿ ಚೆಕ್‌ ಸೃಷ್ಟಿಸಿ, ಇದು ಆಂಧ್ರ ಸಿಎಂ ರಿಲೀಫ್​ ಫಂಡ್​ಗಾಗಿ ನೀಡಿರುವ ಎಂದು ಹೇಳಿಕ ಹೇಳಿ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ಬ್ಯಾಂಕ್​ನಲ್ಲಿ ಡ್ರಾ ಮಾಡಲು ಮುಂದಾಗಿದ್ದು, ಪೊಲೀಸರು ಬಂಧಿಸಿದ್ದಾರೆ.

58 ಕೋಟಿ ರೂ ಪರಿಹಾರವನ್ನು ಆಂಧ್ರ ಸರ್ಕಾರ ನೀಡಿತ್ತೇ ಎಂದು ಅನುಮಾನಗೊಂಡ ಬ್ಯಾಂಕ್‌ ಮ್ಯಾನೇಜರ್‌, ಆಂಧ್ರ ಸಿಎಂ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಅ ವೇಳೆ ಅಷ್ಟು ಮೊತ್ತದ ಪರಿಹಾರ ಹಣ ನೀಡಿಲ್ಲ ಎಂದು ಸಿಎಂ ಕಚೇರಿ ಸ್ಪಷ್ಟಪಡಿಸಿದ್ದು, ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮ್ಯಾನೇಜರ್‌ ನೀಡಿರುವ ದೂರಿನ ಆಧಾರದ ಮೇಲೆ ಆರೂ ಜನರನ್ನು ಪೊಲೀಸರು ಬಂಧಿಸಿದ್ದಾರೆ.


ಇದನ್ನೂ ಓದಿ: ಡಿಜೆಹಳ್ಳಿ ಗಲಬೆಯ ಅಸಲಿಯತ್ತೇನು? ಪೊಲೀಸರು-ಸರ್ಕಾರ ಮಾಡಿದ್ದೇನು? ಸತ್ಯಶೋಧನಾ ವರದಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights