ಜಗದೀಶ್ ಶೆಟ್ಟರ್ ಗೆಲುವಿಗೆ ತಡೆ : ಚಲಾವಣೆ ಆಗಿದ್ದ ಮತದ ಸಂಖ್ಯೆಯೇ ಬೇರೆ, ಇವಿಎಂ ತೋರಿಸಿದ್ದೇ ಬೇರೆಯಂತೆ !
ಹುಬ್ಬಳ್ಳಿ-ಧಾರವಾಡ : ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧಿಸಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಇವಿಎಂ ಮಷೀನ್ನ ಎಡವಟ್ಟಿನಿಂದಾಗಿ ಫಲಿತಾಂಶವನ್ನು ತಡೆಹಿಡಿಯಲಾಗಿದೆ.
ಈ ಕ್ಷೇತ್ರದ ಮತಗಟ್ಟೆ ಸಂಖ್ಯೆ 152 (ಎ) ನಲ್ಲಿ ಚಲಾವಣೆಯಾದ ಮತಕ್ಕಿಂತ ವಿವಿಪ್ಯಾಟ್ನಲ್ಲಿ ಹೆಚ್ಚು ಮತ ತೋರಿಸಿದ್ದು, 207ಮತಗಳು ವಿವಿಪ್ಯಾಟ್ನಲ್ಲಿ ಹೆಚ್ಚಾಗಿ ತೋರಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಹೇಶ್ ನಾಲವಾಡ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ಮಹೇಶ್ ಮನವಿಯ ಆಧಾರದ ಮೇರೆಗೆ ಜಗದೀಶ್ ಶೆಟ್ಟರ್ ಅವರ ಫಲಿತಾಂಶವನ್ನು ತಡೆಹಿಡಿಯಲಾಗಿದೆ.