ಗೌರಿ ಲಂಕೇಶ್ ಹಂತಕರು ಸುಳಿವು ಪತ್ತೆ : ಶೀಘ್ರವೇ ಬಂಧನ- ಗೃಹ ಸಚಿವ ರಾಮಲಿಂಗರೆಡ್ಡಿ..
ಬೆಂಗಳೂರು ; ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ರನ್ನ ಹತ್ಯೆ ಮಾಡಿದ ಹಂತಕರು ಯಾರೆಂದು ಗೊತ್ತಾಗಿದೆ. SIT ಅಧಿಕಾರಿಗಳು ಶೀಘ್ರವೇ ಅವರನ್ನ ಬಂಧಿಸಲಿದ್ದಾರೆ ಎಂದು ಗೃಹ ಸಚಿವ ರಾಮಲಿಂಗರೆಡ್ಡಿ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸಂವಾದದಲ್ಲಿ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, SIT ಯಿಂದ ನನಗೆ ಎಲ್ಲಾ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ. ಅದಷ್ಟು ಬೇಗ ಹಂತಕರ ಬಂಧನವಾಗಲಿದೆ ಎಂದು ತಿಳಿಸಿದರು.
ಸಂಶೋಧಕ ಎಂ.ಎಂ ಕಲ್ಬುರ್ಗಿ ಹತ್ಯೆ ಮಾಡಿದ ಹಂತಕರು ಇನ್ನು ಸಿಕ್ಕಿಬಿದ್ದಲಿ. ಚಿಂತಕ ದಾಬೋಲ್ಕರ್ ಹಂತ್ಯೆ ಪ್ರಕರಣ ಕುರಿತು ಮಹಾರಾಷ್ಟ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸಚಿವ ರಾಮಲಿಂಗರೆಡ್ಡಿ ಹೇಳಿದರು. ಗೌರಿ ಲಂಕೇಶ್ ಹತ್ಯೆಉಲ್ಲಿ ಹಿಂದು ಸಂಘಟನೆಗಳ ಪಾತ್ರದ ಕುರಿತು ಪ್ರಶ್ನೆಗೆ ಉತ್ತರಿಸಲು ಸಚಿವರು ನಿರಾಕರಿಸಿದರು..