26ನೇ ವಯಸ್ಸಿನಲ್ಲಿ ಶುರುವಾದ ಪ್ರೇಮ ಕಥೆ ಬಿಚ್ಚಿಟ್ಟ ನಟ ಮಹೇಶ್ ಬಾಬು….

ತೆಲುಗು ಚಿತ್ರರಂಗದಲ್ಲಿ ಪ್ರಿನ್ಸ್ ಎಂದೇ ಕರೆಯಿಸಿಕೊಳ್ಳುವ ಅತ್ಯಂತ ಪ್ರೀತಿಯ ನಟ ಮಹೇಶ್ ಬಾಬು ಅವರು ತಮ್ಮ 26ನೇ ವಯಸ್ಸಿನಲ್ಲಿ ಶುರುವಾದ ಪ್ರೇಮ ಕಥೆ ಬಿಚ್ಚಿಟ್ಟಿದ್ದಾರೆ.

ಹೌದು… ಸ್ಮಾರ್ಟ್ ಹೀರೋ ಮಹೇಶ್ ಬಾಬು ಅವರಿಗೆ ಸಾವಿರಾರು ಜನ ಫ್ಯಾನ್ಸ್ ಇದ್ದಾರೆ. ಅದ್ರಲ್ಲೂ ಹುಡುಗೀರಂತೂ ಮಹೇಶ್ ಬಾಬು ಅಂದ್ರೆ ತುಂಬಾನೇ ಇಷ್ಟಪಡ್ತಾರೆ. ಸದ್ಯ ನಟ ಮಹೇಶ್ ಬಾಬು ಅವರಿಗೆ 26ನೇ ವಯಸ್ಸಿನಲ್ಲೇ ಕ್ರಷ್ ಆಗಿದ್ದರ ಬಗ್ಗೆ ಬಹಿರಂಗಪಡಿಸಿದ್ದಾರೆ. ಈ ವಿಚಾರವನ್ನು ಸ್ವತ: ಅವರೇ ಹಂಚಿಕೊಂಡಿದ್ದಾರೆ. ಅದ್ಯಾರು ಗೊತ್ತಾ..? ನಟಿ ಮತ್ತು ಈಗ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಅವರ ಮೇಲೆ ಮೋಹ ಹೊಂದಿದ್ದರು ಎಂದು ಬಹಿರಂಗಪಡಿಸಿದರು.

ನಟ ಭಾನುವಾರ ರಾತ್ರಿ ಇನ್‌ಸ್ಟಾಗ್ರಾಮ್‌ನ “ನನ್ನನ್ನು ಕೇಳಿ ಪ್ರಶ್ನೆ” ವೈಶಿಷ್ಟ್ಯದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂವಹನ ನಡೆಸಿದರು. ಅಭಿಮಾನಿಯೊಬ್ಬರು ಮಹರ್ಷಿ ನಟನಿಗೆ ಯಾರ ಮೇಲೂ ಮೋಹವಿದೆಯೇ ಎಂದು ಕೇಳಿದರು, ಅದಕ್ಕೆ ಮಹೇಶ್ ತಮ್ಮ ಪತ್ನಿ ನಮ್ರತಾ ಶಿರೋಡ್ಕರ್ ಅವರನ್ನು ಟ್ಯಾಗ್ ಮಾಡುವ ಮೂಲಕ ಉತ್ತರಿಸಿದ್ದಾರೆ.

“ನಾನು 26 ನೇ ವಯಸ್ಸಿನಲ್ಲಿ ಪ್ರೀತಿ ಮಾಡಿದ್ದೇನೆ. ನಂತರ ನಾನು ಅವಳನ್ನು ಮದುವೆಯಾಗಿದ್ದೇನೆ” ಎಂದು ಅವರು ಇನ್ಸ್ಟಾಗ್ರಾಮ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.

ಮಹೇಶ್ ಬಾಬು ಮತ್ತು ಮಾಜಿ ಮಿಸ್ ಇಂಡಿಯಾ ನಮ್ರತಾ ಶಿರೋಡ್ಕರ್ ಅವರು 2000 ನೇ ಇಸವಿಯಲ್ಲಿ ಬಿಡುಗಡೆಯಾದ (ಮಹೇಶ್ ಬಾಬು ಅವರಿಗೆ 25 ವರ್ಷ ವಯಸ್ಸಾಗಿದ್ದಾಗ) ಬಿಡುಗಡೆಯಾದ ವಂಸಿಯ ಸೆಟ್‌ಗಳಲ್ಲಿ ಭೇಟಿಯಾದರು. ನಂಥರ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಅವರು 2005 ರಲ್ಲಿ ವಿವಾಹವಾದರು. ದಂಪತಿಗಳು ಸದ್ಯ ಗೌತಮ್ (13) ಎಂಬ ಮಗ ಮತ್ತು ಸೀತಾರಾ ಎಂಬ 7 ವರ್ಷದ ಮಗಳಿಗೆ ಪೋಷಕರು.

https://www.instagram.com/urstrulymahesh/?utm_source=ig_embed

ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ತಮ್ಮ 15 ನೇ ವಿವಾಹ ವಾರ್ಷಿಕೋತ್ಸವವನ್ನು ಈ ವರ್ಷದ ಫೆಬ್ರವರಿಯಲ್ಲಿ ಆಚರಿಸಿದರು. 44 ವರ್ಷದ ನಟ ಇನ್ಸ್ಟಾಗ್ರಾಮ್ನಲ್ಲಿ ನಮ್ರತಾ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. “Happy 15 my love! Love you a little more each day.” “ಹ್ಯಾಪಿ 15 ಮೈ ಲವ್! ಪ್ರತಿದಿನ ಸ್ವಲ್ಪ ಹೆಚ್ಚು ಪ್ರೀತಿಸುತ್ತೇನೆ.” ಎಂದು ಪೋಸ್ಟ್ ಮಾಡಿದ್ದಾರೆ.

ನಮ್ರತಾ ಶಿರೋಡ್ಕರ್ ಅವರು ಬ್ರೈಡ್ ಅಂಡ್ ಪ್ರಿಜುಡೀಸ್, ದಿಲ್ ವಿಲ್ ಪ್ಯಾರ್ ವ್ಯಾರ್, ತೆಹ್ಜೀಬ್ ಮತ್ತು ಎಲ್ಒಸಿ ಕಾರ್ಗಿಲ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮಹೇಶ್ ಬಾಬು ಕೊನೆಯ ಬಾರಿಗೆ ಹೈ-ಆಕ್ಟೇನ್ ತೆಲುಗು ಆಕ್ಷನ್ ಚಿತ್ರ ‘ಸರಿಲೆರು ನೀಕೆವ್ವರು’ ದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ಅನಿಲ್ ರವಿಪುಡಿ ನಿರ್ದೇಶಿಸಿದ್ದಾರೆ. ಮಹೇಶ್ ಬಾಬು ಅವರಲ್ಲದೆ, ಈ ಚಿತ್ರದಲ್ಲಿ ವಿಜಯಶಾಂತಿ, ರಶ್ಮಿಕಾ ಮಂದಣ್ಣ, ಪ್ರಕಾಶ್ ರಾಜ್, ರಮ್ಯಾ ಕೃಷ್ಣ ಮತ್ತು ರಾಜೇಂದ್ರ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ನಟ 2019 ರ ಹಿಟ್ ಮಹರ್ಷಿ ಚಿತ್ರದಲ್ಲೂ ನಟಿಸಿದ್ದಾರೆ. ನಟ ಇತ್ತೀಚೆಗೆ ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರೊಂದಿಗೆ ಚಿತ್ರಕ್ಕೆ ಸಹಿ ಹಾಕಿದ್ದು, ಇದನ್ನು ಕೆ.ಎಲ್. ನಾರಾಯಣ ನಿರ್ಮಿಸಲಿದ್ದು, ಇದು 2022 ರಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights