೧೦೦ರೂ ಕೂಲಿ ಹಣಕ್ಕೆ ರೈತನನ್ನೆ ಹೊಡೆದು ಸಾಯಿಸಿದ ಆಳುಗಳು….!
೧೦೦ರೂ ಕೂಲಿ ಹಣಕ್ಕೆ ರೈತನನ್ನೆ ಹೊಡೆದು ಆಳುಗಳು ಸಾಯಿಸಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕೋಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೋಟಹಳ್ಳಿ ಗ್ರಾಮದ ಬಸವರಾಜು (೪೦) ಆಳುಗಳ ಹಲ್ಲೆಯಿಂದ ಮೃತಪಟ್ಟ ರೈತ. ಮೃತ ರೈತ ಬೆಳಿಗ್ಗೆ ತನ್ನ ಜಮೀನಿಗೆ ಇಬ್ಬರು ಆಳುಗಳನ್ನು ಕರೆದುಕೊಂಡು ಕೆಲಸ ಮಾಡಿಸಿದ್ರು. ೫೦೦ ರೂ ಕೂಲಿ ನೀಡಿ ಉಳಿಕೆ ೧೦೦ ರೂ ಸಂಜೆ ಕೊಡುವುದಾಗಿ ಹೇಳಿದ್ರು. ಸಂಜೆ ಈ ವಿಚಾರವಾಗಿ ಗಲಾಟೆ ನಡೆದು ಆಳುಗಳಾದ ಶಿವು,ನಾಗರಾಜು ಮತ್ತು ಗವಿರಂಗೇಗೌಡ ರೈತನ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ತೀವ್ರ ಗಾಯದಿಂದ ಕುಸಿದು ಬಿದ್ದು ರೈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬರುವಾಗ ರೈತ ಸಾವನ್ನಪ್ಪಿದ್ದಾನೆ. ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.