ಹೆಚ್,ಡಿ,ರೇವಣ್ಣ ಹೇಳಿಕೆಗೆ ಸಚಿವ ಮಾಧುಸ್ವಾಮಿ ತಿರುಗೇಟು…
ಹೆಚ್,ಡಿ,ರೇವಣ್ಣ ಅಧ್ಯಕ್ಷ ಪಟ್ಟ ಬೇಡ ಅಂದಿದ್ರೆ ಚುನಾವಣಾಧಿಕಾರಿಯನ್ನ ಹೆದರಿಸಿ ಯಾಕೆ ನಾಮಪತ್ರ ಸಲ್ಲಿಸಿದ್ರು ಎಂದು ಕೆಎಂ ಎಫ್ ಅಧ್ಯಕ್ಷ ಸ್ಥಾನ ಪುಟಗೋಸಿ ಎಂದ ಹೆಚ್,ಡಿ,ರೇವಣ್ಣ ಹೇಳಿಕೆಗೆ ಮಾಧುಸ್ವಾಮಿ ತಿರುಗೇಟು ನೀಡಿದ್ದಾರೆ.
ಕೆಲ ಜಿಲ್ಲಾಧ್ಯಕ್ಷರನ್ನ ಹೈದರಾಬಾದ್ ಗೆ ಯಾಕೆ ಕರೆದುಕೊಂಡು ಹೋಗಿದ್ರು ಎಂದು ಪ್ರಶ್ನೆಸಿದ್ದಲ್ಲದೇ ರೇವಣ್ಣ ನಡೆ ವಿರೋಧಿಸುವರನ್ನ ಮತ ಪಟ್ಟಿಗೆ ಸೇರಿಸದಂತೆ ಮಾಡಿದ್ರು ಎಂದು ವಾಗ್ದಾಳಿ ನಡೆಸಿದರು. ಸಿಎಂಗೂ ಕೆಎಂಎಫ್ ಗೂ ಸಂಬಂಧವೇ ಗೊತ್ತಿಲ್ಲ ಸಿಎಂ ವಿಶ್ವಾಸಮತ ಕೇಳೋ ವೇಳೆ,ರೇವಣ್ಣ ಪ್ಲಾನ್ ಮಾಡಿ ಕೆಎಂಎಫ್ ಚುನಾವಣೆ ನಡೆಸೋಕೆ ಹೋಗಿದ್ರು.
ಅವರು ಇಲ್ಲಿ ವಿಶ್ವಾಸಮತಕ್ಕೆ ಯಡಿಯೂರಪ್ಪ ವಿರುದ್ಧ ಕೈ ಎತ್ತಬೇಕಿತ್ತಾ ಇಲ್ಲಾ ಎಲೆಕ್ಷನ್ ಮಾಡಬೇಕಿತ್ತಾ ಅವರ ಮಟ್ಟಕ್ಕೆ ನಾವು ಇಳಿದಿಲ್ಲ ಎಂದು ಮಾಜಿ ಸಚಿವ ರೇವಣ್ಣ ವಿರುದ್ಧ ಸಚಿವ ಮಾಧುಸ್ವಾಮಿ ಕಿಡಿ ಕಾರಿದ್ರು. ಕಾಂಗ್ರೆಸ್ ನವರನ್ನ ಹೊತ್ತುಕೊಂಡು ಹೋಗಿ ಏಕೆ ಹೈದ್ರಾಬಾದ್ ನಲ್ಲಿ ಇಟ್ಟಿದ್ದರು ಎಂಬುದನ್ನ ಹೇಳಲಿ ಎಂದು ರೇವಣ್ಣಗೆ ಸವಾಲ್ ಹಾಕಿದ್ರು.