ಹಾಸನದ ಡಿಕೆ ಶಿವಕುಮಾರ್ ಅಪ್ತನ ಮನೆಗೆ ರಾತ್ರೋ ರಾತ್ರಿ ಇಡಿ ತಂಡ ಭೇಟಿ?
ಹಾಸನದ ಬಿಎಂ, ರಸ್ತೆಯಲ್ಲಿರುವ ಸಚಿನ್ ನಾರಾಯಣ್ ಡಿಕೆ ಶಿವಕುಮಾರ್ ಅಪ್ತನ ಮನೆಗೆ ರಾತ್ರೋ ರಾತ್ರಿ ಇಡಿ ತಂಡ ಭೇಟಿ ನೀಡಿದೆ ಎನ್ನಲಾಗುತ್ತಿದೆ. ಸಚಿನ್ ನಾರಾಯಣ್ ರನ್ನ ಬಂಧಿಸಲು ಇಡಿ ಅಧಿಕಾರಿಗಳು ಆಗಮಿಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಉದ್ಯಮಿ ಸಚಿನ್ ನಾರಾಯಣ್ ಮನೆಗೆ ಇಡಿ ಅಧಿಕಾರಿಗಳ ತಂಡ ಭೇಟಿ ನೀಡಿದೆ ಎನ್ನಲಾಗುತ್ತಿದೆ. ಸಚಿನ್ ನಾರಾಯಣ್ ಮಾಜಿ ಸಚಿವ ಬಿ ಶಿವರಾಂ ಅಳಿಯ. ಡಿಕೆ ಶಿವಕುಮಾರ್ ಜೊತೆ ವಿವಿಧ ಉದ್ಯಮ ಗಳಲ್ಲಿ ಪಾಲುದಾರಿಕೆ ಹೊಂದಿರುವ ಸಚಿನ್.
ಇಡಿ ಇಲಾಖೆಯಿಂದ ಮಾಜಿ ಸಚಿವ ಡಿಕೆಶಿ ಬಂಧನ ಹಿನ್ನೆಲೆ, ಡಿಕೆಶಿಯ ಎಲ್ಲಾ ವ್ಯವಹಾರಗಳಲ್ಲಿಯೂ ಪಾಲುದಾರರಾಗಿರುವ ಮತ್ತು ಎರಡನೇ ಆರೋಪಿ ಸಚಿನ್ ನಾರಾಯಣ್ ಪರಾರಿಯಾಗಿದ್ದಾರೆ. ಸಚಿನ್ ನಾರಾಯಣ್ ರನ್ನ ಬಂಧಿಸುವ ಸಾಧ್ಯತೆ ಹಿನ್ನೆಲೆ ಪರಾರಿಯಾಗಿದ್ದಾರೆ.
8.59 ಕೋಟಿ ಹಣವನ್ನ ದೆಹಲಿಗೆ ಸಾಗಿಸಿದ್ದ ಸಚಿನ್ ನಾರಾಯಣ್, ಇಡಿ ವಿಚಾರಣೆ ರದ್ದು ಕೋರಿ ಹೈಕೋರ್ಟ್ ಗೆ ಸಚಿನ್ ನಾರಾಯಣ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಸಚಿನ್ ನಾರಾಯಣ್ ರ ಅರ್ಜಿ ರದ್ದುಪಡಿಸಿತ್ತು. ಡಿಕೆಶಿಯೊಂದಿಗೆ ಬ್ಯುಸಿನೆಸ್ ಪಾರ್ಟ್ನರ್ ಆಗಿರುವ ಸದ್ಯ ಸಚಿನ್ ನಾರಾಯಣ್ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿರುವ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.