ಹಣ ಕದ್ದಿದ್ದಾನೆಂದು ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ ಪುಂಡರು…..!
ಹಣ ಕದ್ದಿದ್ದಾನೆಂದು ಪುಂಡರ ಗುಂಪೊಂದು ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿದೆ.
ಚಪ್ಪಲಿ ಒಲೆಯೊ ಕೆಲಸ ಮಾಡುವ 13 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಚಿಲ್ಲರೆ ಅಂಗಡಿ ಮಾಲೀಕ ಉಮೇಶ್ ಹಾಗು ಸ್ನೇಹಿತನಿಂದ ಕೃತ್ಯ ಎಸಗಲಾಗಿದೆ ಎಂದು ಬಾಲಕ ಹೇಳಿಕೊಂಡಿದ್ದಾನೆ. ಬಂಗಾರಪೇಟೆ ಹೊರವಲಯದ ಅತ್ತಿಗಿರಿಕೊಪ್ಪ ಕೆರೆ ಬಳಿ ಲೈಂಗಿಕ ಕಿರುಕುಳ ನೀಡಿ, ಮನಬಂದಂತೆ ಥಳಿಸಿರುವ ಆರೋಪಿಗಳು ಬಾಲಕನ ಮೈಮೇಲೆ ಬಾಸುಂಡೆ ಬರುವ ಹಾಗೆ ಒಡೆದಿದ್ದಾರೆ.
ಬಾಲಕ ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.