ಸಿದ್ದಾರ್ಥ ಒಡೆತನದ ಕಂಪನಿ ಬಂದ್ – ನೂರಾರು ಕಾರ್ಮಿಕರು ಕಂಗಾಲು
ಚಿಕ್ಕಮಗಳೂರು ನಗರದ ಎಬಿಸಿ ಆವರಣದಲ್ಲಿರುವ ಸಿದ್ದಾರ್ಥ ಒಡೆತನದ ಡಾರ್ಕ್ ಫಾರೆಸ್ಟ್ ಫರ್ನಿಚರ್ ಕಂಪನಿ ಬಂದ್ ಮಾಡಲಾಗಿದ್ದು, ಏಕಾಏಕಿ ಕಂಪನಿ ಮುಚ್ಚಿದ ಪರಿಣಾಮ ನೂರಾರು ಕಾರ್ಮಿಕರು ಕಂಗಾಲಾಗಿದ್ದಾರೆ.
ಹೌದು.. ಕಾರ್ಮಿಕರಿಗೆ ಏಕಾಏಕಿ ನೋಟಿಸ್ ನೀಡಿ ಕಂಪನಿ ಬಂದ್ ಮಾಡಲಾಗಿದೆ. ಇಂದಿನಿಂದ ಕಂಪನಿ ಸ್ಥಗಿತಗೊಳಿಸುವುದಾಗಿ ಕಾರ್ಮಿಕರಿಗೆ ಕಂಪನಿ ನೋಟಿಸ್ ನೀಡಿದೆ. ಸಿದ್ದಾರ್ಥ ಮರಣ ನಂತರ ನಷ್ಟ ಉಂಟಾದ ಪರಿಣಾಮ ಕಂಪನಿ ಬಂದ್ ಮಾಡಲಾಗಿದೆ ಎನ್ನಲಾಗುತ್ತಿದೆ.
ಕಂಪನಿ ಬಂದ್ ಆದ ಪರಿಣಾಮ ಎಬಿಸಿ ಬಳಿ ಕಾರ್ಮಿಕರು ಜಮಾಯಿಸಿದ್ದಾರೆ.