ಸಿಎಂ ಯಡಿಯೂರಪ್ಪ ಆಗಮಿಸ್ತಿರೋ ಕಾರ್ಯಕ್ರಮಕ್ಕೆ ಜಿಲ್ಲಾ ಸಚಿವರಿಗಿಲ್ಲ ಆಹ್ವಾನ…
ಸಿಎಂ ಯಡಿಯೂರಪ್ಪ ಆಗಮಿಸ್ತಿರೋ ಕಾರ್ಯಕ್ರಮಕ್ಕೆ ಜಿಲ್ಲಾ ಸಚಿವರಿಗೆ ಆಹ್ವಾನ ಮಾಡದೇ ಇರೋದಕ್ಕೆ ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಬೇಸರಗೊಂಡಿದ್ದಾರೆ.
ಭಾನುವಾರ ವಿಶ್ವಕರ್ಮ ಸಮುದಾಯದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಇದರಲ್ಲಿ ಕೈ ನಾಯಕರು, ಜೆಡಿಎಸ್ ಮುಖಂಡರಿಗೆ ಆಹ್ವಾನ ಮಾಡಲಾಗಿದೆ. ಆದರೆ ಪಕ್ಷೇತರ ಶಾಸಕ, ಸಚಿವ ಎಚ್ ನಾಗೇಶ್ ಗೆ ಮಾತ್ರ ಆಹ್ವಾನ ಮಾಡಲಾಗಿಲ್ಲ.
ಇದರಿಂದ ಬೇಸರಗೊಂಡ ಅಬಕಾರಿ ಸಚಿವ ಎಚ್ ನಾಗೇಶ್ , ಸಿಎಂ ಯಡಿಯೂರಪ್ಪ ಜಿಲ್ಲೆಗೆ ಬರುವ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ. ಕಾರ್ಯಕ್ರಮಕ್ಕೆ ಹೋಗಲ್ಲ ಇನ್ನೂ ಮುಖ್ಯಮಂತ್ರಿಗಳ ಬಳಿ ಯಾವ ಜಿಲ್ಲೆಗೆ ಸಂಬಂದಿಸಿದ ಬೇಡಿಕೆ ಇಡಲು ಸಾಧ್ಯ. ಸದ್ಯಕ್ಕೆ ಆಹ್ವಾನವಿಲ್ಲ ಹಾಗಾಗಿ ಅದರ ಮಾತನಾಡುವುದು ನ್ಯಾಯವಲ್ಲ. ಅಯೋಜಕರಿಗೆ ಕಾಮನ್ ಸೆನ್ಸ್ ಇಲ್ಲ ಎಂದು ಸಚಿವ ನಾಗೇಶ್ ಹರಿಹಾಯ್ದಿದ್ದಾರೆ.
ಇದು ಕೆಎಚ್ ಮುನಿಯಪ್ಪ ಆಪ್ತ ಕಾಂಗ್ರೆಸ್ ಮುಖಂಡ ರಾಮಪ್ರಸಾದ್ ಆಯೋಜಿಸಿರುವ ಕಾರ್ಯಕ್ರಮ. ಜಿಲ್ಲೆಯ ಅಭಿವೃದ್ದಿ ಬಗ್ಗೆ ಸ್ಟಡಿ ಮಾಡುತ್ತಿದ್ದೇನೆ ಎಂದು ಕಿಡಿ ಕಾರಿದ್ದಾರೆ.