ಸಾಲಬಾಧೆ ತಾಳಲಾರದೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ರೈತ ಆತ್ಮಹತ್ಯೆ…!
ಸಾಲಬಾಧೆ ತಾಳಲಾರದೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೌದು.. ಸಾಲಬಾಧೆ ತಾಳಲಾರದೆ ರೈತನೊಬ್ಬ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕುಟಕನಕೇರಿ ಗ್ರಾಮದ ತನ್ನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಾಲಪ್ಪ ಕಂಬಾರ(65) ಆತ್ಮಹತ್ಯೆ ಮಾಡಿಕೊಂಡ ರೈತ. ಪಿಕೆಪಿಎಸ್ ಬ್ಯಾಂಕ್ ಕುಟಕನಕೇರಿ, ನಂದಿಕೇಶ್ವರ ಶಾಖೆಯಲ್ಲಿ 2ಲಕ್ಷ 6 ಸಾವಿರ ಪಂಪಸೆಟ್ ಹಾಗೂ ಬೆಳೆ ಸಾಲವನ್ನು ಬಾಲಪ್ಪ ಮಾಡಿಕೊಂಡಿದ್ದನು. ಬೋರವೆಲ್ ನೀರು ಬತ್ತಿ ಬೆಳೆ ಒಣಗಿದ ಹಿನ್ನೆಲೆ ಮಾಡಿದ ಸಾಲ ತೀರಿಸೋ ಬಗ್ಗೆ ಮನನೊಂದಿದ್ದನು. ಹೀಗಾಗಿ ತನ್ನ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.