ಸಂತೆಯಲ್ಲಿ ಮೇಕೇ ಕುರಿ ಖರೀದಿಸುವ ಮುನ್ನ ಎಚ್ಚರ ರೈತರೆ….!

ಸಂತೆಯಲ್ಲಿ ಮೇಕೇ ಕುರಿ ಖರೀದಿಸುವ ಮುನ್ನ ಎಚ್ಚರ ರೈತರೆ…

ಹೌದು… ಯಾಕೆ ಹೀಗೆ ಹೇಳ್ತಿದ್ದಾರೆ ಅನ್ಕೊಂಡ್ರಾ..? ಇಲ್ಲಿದೆ ನೋಡಿ ಅದಕ್ಕೆ ಉತ್ತರ.

ಸಕ್ಕರೆನಾಡಲ್ಲಿ ಕುರಿ ಮೇಕೆ ಹೊಟ್ಟೆಗೆ ನೀರು ತುಂಬಿಸಿ ರೈತರಿಗೆ ವಂಚನೆ ಮಾಡಲಾಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯಲ್ಲಿ ಕಿರಾತಕರ ಜಾಲ ರೈತರಿಗೆ ವಂಚನೆ ಮಾಡೋ ಕೆಲಸದಲ್ಲಿ ಸಕ್ರಿಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವಂಚಕರ ಜಾಲದ ವಂಚನೆಯ ಕೃತ್ಯ ವೈರಲ್ ಆಗಿದೆ.

ಕೆ.ಆರ್.ಪೇಟೆ ತಾಲೂಕಿನ ಕುರಿ ಮೇಕೆ ಸಂತೆಯಲ್ಲಿ  ಕುರಿ -ಮೇಕೆ ಹೊಟ್ಟೆ ನೀರು ತುಂಬಿಸಿ ಹೆಚ್ಚಿನ‌ ತೂಕ ತೋರಿಸಿ ರೈತರಿಗೆ ವಂಚನೆ ಮಾಡ್ತಿದ್ದಾರೆ ಕಿರಾತಕರು. ಕಿಕ್ಕೇರಿ ಹೋಬಳಿಯ ಕೆರೆಯೊಂದರ ಬಳಿ ಕುರಿ ಹೊಟೆಗೆ ನೀರು ತುಂಬಿಸುವ ದೃಶ್ಯವನ್ನು ರೈತನೋರ್ವ ಸೆರೆ ಹಿಡಿದಿದ್ದಾನೆ.

ವಂಚಕರ ಕೃತ್ಯ ಕಂಡು ತರಾಟೆಗೆ ತೆಗೆದುಕೊಂಡ ರೈತನನ್ನು ಸಮಾಧಾನ ಮಾಡಿ ಸಾಗ ಹಾಕಿರೋ ಕಿರಾತಕರು, ಕುರಿ -ಮೇಕೆಯ ಹೊಟ್ಟೆಗೆ ಬಲವಂತವಾಗಿ ೧೦ ಲೀ ನೀರು ತುಂಬಿಸುವ ಕಾರ್ಯವನ್ನು ಮುಂದುವರೆಸಿದ್ದಾರೆ. ಇದರಿಂದ ಪ್ರಾಣಿಗಳ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಕಾಸಿಗಾಗಿ ಕೀಳುಮಟ್ಟಕ್ಕಿಳಿದ ವಂಚಕರಿಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights