ವೈವಾಹಿಕ ವಿವಾದಕ್ಕೆ ಅಳಿಯನಿಂದ ಅತ್ತೆ ಕೊಲೆ…..!
ಸ್ವಂತ ಅಳಿಯನೇ ತನ್ನ ಅತ್ತೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಬಡವನಹಳ್ಳಿಯಲ್ಲಿ ನಡೆದಿದೆ.
ಮಧುಗಿರಿ ತಾಲೋಕ್ ದೊಡೇರಿ ಹೋಬಳಿಯ ಬಡವನಹಳ್ಳಿ ಯ ಸಾರ್ವಜನಿಕ ಆಸ್ಪತ್ರೆಯ ಬಳಿ ವಾಸವಾಗಿದ್ದ ಪ್ರೇಮಲತಾ (47) ಎಂಬುವವರೇ ಕೊಲೆಯಾದ ದುರ್ದೈವಿ. ಈಕೆಯ ಮಗಳಾದ ಮಾನಸ ಳನ್ನು ಆರೋಪಿಯಾದ ಪ್ರದೀಪ್ ಕುಮಾರ್ ಮದುವೆಯಾಗಿದ್ದನು. ನಂತರ ಅವರಿಬ್ಬರ ನಡುವೆ ವೈವಾಹಿಕ ವಿವಾದ ಏರ್ಪಟ್ಟಿ ತ್ತೆಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತನ್ನ ಅತ್ತೆಯನ್ನು ಪ್ರದೀಪ್ ಕುಮಾರ್ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಬಡವನಹಳ್ಳಿ ಪೊಲೀಸರು ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ .