ವಿಶ್ವವಿಖ್ಯಾತ ದಸರಾ ಮಹೋತ್ಸವ : ಮೈಸೂರಿನಲ್ಲಿ ಗಜಪಡೆ ತಾಲೀಮು ಪ್ರಾರಂಭ
ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಮೈಸೂರಿನಲ್ಲಿ ಗಜಪಡೆ ತಾಲೀಮು ಪ್ರಾರಂಭಗೊಂಡಿದೆ.
ಬರಿ ಮೈ ನಡಿಗೆ ತಾಲೀಮಿನಲ್ಲಿ ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಅಭಿಮನ್ಯು, ಧನಂಜಯ, ಈಶ್ವರ, ವಿಜಯಾ, ವರಲಕ್ಷ್ಮಿ ಸೇರಿ ಎಲ್ಲ ಆರು ಆನೆಗಳೂ ಇದರಲ್ಲಿ ಭಾಗಿಯಾಗಿವೆ.
ಇನ್ನೂ ಜಂಬೂ ಸವಾರಿಗಾಗಿ ಆನೆಗಳಿಗೆ ತರಬೇತಿ ನೀಡಲಾಗುತ್ತಿದೆ.
ಮೈಸೂರು ಅರಮನೆಯಿಂದ ಹೊರಟ ಆನೆಗಳು ರಾಜ ಬೀದಿಗಳಲ್ಲಿ ಗಜ ಗಾಂಭೀರ್ಯ ನಡಿಗೆ ಆರಭಿಸಿವೆ. ಎಸ್ಕಾರ್ಟ್ ಸಹಿತ ಪೊಲೀಸ್ ಬಂದೋಬಸ್ತ್ ಮೂಲಕ ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆಗಳಲ್ಲಿ ಆನೆಗಳ ತಾಲೀಮು ಮಾಡಲಾಗುತ್ತಿದೆ.