ವರದಕ್ಷಿಣೆ ಕಿರುಕುಳಕ್ಕೆ ಒಂದೇ ಕುಟುಂಬದ ನಾಲ್ಕು ಜೀವಗಳು ಬಲಿ….!
ವರದಕ್ಷಿಣೆ ಕಿರುಕುಳಕ್ಕೆ ನಾಲ್ಕು ಜೀವ ಬಲಿಯಾದ ಘಟನೆ ರಾಯಚೂರಿನ ನಾರಾಯಣಪುರ ಬಲದಂಡೆ ನಾಲೆಯ ದೇವದುರ್ಗ ತಾಲ್ಲೂಕಿನ ಕೊದ್ದಡ್ಡಿ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿ ಗಂಡ, ಹಾಗೂ ನಾದನಿ ಮತ್ತು ಅತ್ತೆ ದಿನ ನಿತ್ಯ ವರದಕ್ಷಿಣೆ ಕಿರುಕುಳಕ್ಕೆ ಯುವತಿ ಸೇರಿ ಮೂರು ಮಕ್ಕಳು ಸಾವನ್ನಪ್ಪಿದ್ದಾರೆ.
ವರದಕ್ಷಿಣೆ ತರುವಂತೆ ಮನೆಯಿಂದ ಹೊರಗೆ ಹಾಕಿದ ಗಂಡನ ಮನೆಯವರು. ಜೊತೆಗೆ ಗಂಡನ ಮನೆಯವರು ವರದಕ್ಷಿಣೆ ಹಣ ತರದೆ ಮನೆಗೆ ಬರಬಾರದು ಎಂದು ಮನೆಯಿಂದ ಹೊರಗೆ ಹಾಕಿದ್ದರು. ಇದರಿಂದ ಬೇಸತ್ತ ಹೆಂಡತಿ ತನ್ನ ಮೂರು ಮಕ್ಕಳನ್ನು ಸಾಯಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಳೆದ ಐದು ವರ್ಷಗಳ ಹಿಂದೆ ದೇವದುರ್ಗ ತಾಲ್ಲೂಕಿನ ದೇವತಗಲ್ ಗ್ರಾಮದಲ್ಲಿದಲ್ಲಿ ಮದುವೆಯಾಗಿತ್ತು. ಮೂರು ಮಕ್ಕಳು ಸಮೇತ ತವರು ಮನೆಗೆ ವರದಕ್ಷಿಣೆ ಹಣ ತರಲು ತೆರಳಿದ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ.
ನಾರಾಯಣಪುರ ಬಲದಂಡೆ ನಾಲೆಯ ದೇವದುರ್ಗ ತಾಲ್ಲೂಕಿನ ಕೊದ್ದಡ್ಡಿ ಗ್ರಾಮದಲ್ಲಿ ನಾಲ್ಕು ಜನರ ಶವ ಪತ್ತೆಯಾಗಿವೆ.
ನಸೀಮ ಮಹಿಬೂಬ್ (೨೮), ಮಹ್ಮದ್ ಹನೀಫ್( ೫)
ಐಯಾನ್ (೩) ರೀಗಾನ್ (೧) ಮೃತಪಟ್ಟ ದುರ್ದೈವಿಗಳು
ಸಿರಿವಾರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.