ರೌಡಿಸಂ ನಲ್ಲಿ ಹೆಸರು ಮಾಡಲು ಯುವಕನೋರ್ವ ಮಾಡಿದ್ದೇನು ಗೊತ್ತಾ…?
ರೌಡಿಸಂ ನಲ್ಲಿ ಹೆಸರು ಮಾಡಲು ಯುವಕನೋರ್ವ ಲಾಂಗ್ ಹಿಡಿದು ಬೇಕರಿ ಗೆ ನುಗ್ಗಿ ಹಲ್ಲೆ ಮಾಡಿದ ಘಟನೆ ಮಂಡ್ಯ ನಗರದ ಜೈಲ್ ವೃತ್ತದ ಬೇಕರಿಯಲ್ಲಿ ನಡೆದಿದೆ. ಸಕ್ಕರೆನಾಡಲ್ಲಿ ತಡವಾಗಿ ಬೆಳಕಿಗೆ ಬಂದಿರುವ ಪ್ರಕರಣ ಇದಾಗಿದ್ದು, ಕ್ಯಾಂತಗೆರೆಯ ನಿವಾಸಿ ನಾಗೇಶ್ ಎಂಬ ಯುವಕನಿಂದ ಹುಚ್ಚಾಟ ನಡೆದಿದೆ.
ಹಾಡುಹಗಲೇ ಲಾಂಗ್ ಹಿಡಿದು ಬೇಕರಿ ಮಾಲೀಕನ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾನೆ. ಭಯ ಭೀತಿಯಿಂದ ಒಳಗೆ ಓಡಿ ಹೋಗಿದ್ದರಿಂದ ಅನಾಹುತ ತಪ್ಪಿದೆ. ಯುವಕ ಲಾಂಗ್ ಹಿಡಿದು ಹಲ್ಲೆಗೆ ಯತ್ನಿಸಿದ ಘಟನೆ ಸಿ.ಸಿ. ಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಬಳಿಕ ಪೊಲೀಸರಿಗೆ ಬೇಕರಿ ಮಾಲೀಕ ದೂರು ನೀಡಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ತನ್ನ ರೌಡಿಸಂ ಹೆಸರಿನ ಆಸೆಯನ್ನು ಆರೋಪಿ ಬಿಚ್ಚಿಟ್ಟಿದ್ದಾನೆ. ಆರೋಪಿಯ ರೌಡಿಸಂ ಆಸೆ ಕೇಳಿ ದಂಗಾಗಿದ್ದಾರೆ ಪೊಲೀಸರು. ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಮಂಡ್ಯ ಪಶ್ವಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.