ರಾತ್ರಿ ಸುರಿದ ಭಾರಿ ಮಳಗೆ ವಾಹನದ ಮೇಲೆ ಉರುಳಿ ಬಿದ್ದ ಸ್ವಾಗತ ಕಮಾನು…..!
ರಾತ್ರಿ ಸುರಿದ ಭಾರಿ ಮಳಗೆ ವಾಹನದ ಮೇಲೆ ಸ್ವಾಗತ ಕಮಾನುವೊಂದು ಉರುಳಿ ಬಿದ್ದ ಘಟನೆ ಮಂಡ್ಯದ ಶ್ರೀರಂಗಪಟ್ಟಣದ ಕಿರಂಗೂಂರು ಬಳಿಯ ಮೈ-ಬೆಂ ಹೆದ್ದಾರಿಯಲ್ಲಿ ನಡೆದಿದೆ.
ಶ್ರೀರಂಗಪಟ್ಟಣ ದಸರಾಗಾಗಿ ಹಾಕಲಾಗಿದ್ದ ಭಾರೀ ಗಾತ್ರದ ಸ್ವಾಗತ ಕಮಾನು, ರಾತ್ರಿ ಮಳೆ ಸುರಿಯುತ್ತಿರುವ ವೇಳೆಯಲ್ಲಿ ಸರಕು ಸಾಗಾಣೆ ಲಾರಿಯ ಮೇಲೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಸರಕು ವಾಹನದ ಮೇಲೆ ಬಿದ್ದಕಾರಣ ಯಾವುದೇ ಪ್ರಾಣಾಪಾಯವಾಗಿಲ್ಲ.
ಆದ್ರೆ ಎಡೆ ಬಿಡದೆ ಸುರಿಯುತ್ತಿದ್ದ ಮಳೆಯ ಕಾರಣ ಸ್ವಾಗತ ಕಮಾನು ತೆರವಿಗೆ ಅಡ್ಡಿಯಾಗಿ, ಸುಮಾರು ೧ ಗಂಟೆಕಾಲ ಮೈ-ಬೆಂ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ. ಬಳಿಕ ಕ್ರೇನ್ ಸಹಾಯದಿಂದ ಕುಸಿದು ಬಿದ್ದ ಸ್ಚಾಗತ ಕಮಾನು ತೆರವುಗೊಳಿಸಲಾಯಿತು.