ಯಾದಗಿರಿಯ ಗಡೇದುರ್ಗಾದೇವಿಗೆ ಪತ್ರ ಬರೆದ ಜನ : ಮಾಜಿ ಸಚಿವ ಡಿಕೆಶಿ ಸಂಕಷ್ಟ ನಿವಾರಣೆಗೆ ಪೂಜೆ
ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಗೋನಾಳ ಗ್ರಾಮದ ಗಡೇದುರ್ಗಾದೇವಿಗೆ ಪತ್ರ ಬರೆಯುವ ಮೂಲಕ ಮಾಜಿ ಸಚಿವ ಡಿಕೆಶಿ ದೇವಿಗೆ ಸಂಕಷ್ಟ ನಿವಾರಣೆಗಾಗಿ ನೋವು ತೊಡಿಕೊಂಡಿದ್ದಾರೆ.
ಸದ್ಯ ಇಡಿ ಹಿಡಿತದಿಂದ ಹೊರ ಬಂದಿರೋ ಡಿಕೆಶಿ ಪತ್ರದ ಮೂಲದ ದೇವಿಯ ಮೊರೆ ಹೋಗಿದ್ದಾರೆ.ಈ ಮಧ್ಯೆ ಯಾದಗಿರಿಯ ಗಡೇ ದುರ್ಗಾದೇವಿ ಅರ್ಚಕರಿಗೆ ಪತ್ರ ಕಳುಹಿಸಿಕೊಟ್ಟಿರೋ ಅವರು, ಕೇಸ್ ನಿಂದ ಮುಕ್ತಿ ಸಿಗುವಂತೆ ದೇವಿಗೆ ಮೊರೆ ಹೋಗಿದ್ದಾರೆ..ಆಲ್ ಕೇಸ್ ಶುಡ್ ಡಿಲೀಟ್ ಎಂದು ತಮ್ಮ ಹಸ್ತಾಕ್ಷರದಲ್ಲೇ ಬರೆದ ಪತ್ರ ಇತ್ತಿಚೆಗೆ ಬೆಂಗಳೂರುಗೆ ತೆರಳಿ ಡಿಕೆಶಿಗೆ ಭೇಟಿಯಾದ ದೇಗುಲದ ಅರ್ಚಕ ಮಹಾದೇವಪ್ಪ ಪೂಜಾರಿಗೆ ನೀಡಿ ಸಂಕಷ್ಟ ನಿವಾರಣೆಗಾಗಿ ಪೂಜೆ ಮಾಡುವಂತೆ ಸೂಚಿಸಿದ್ದರು.
ಹೀಗಾಗಿ ಪತ್ರವನ್ನ ಪಡೆದ ಮಂದಿರ ಪೂಜಾರಿ ಮಹಾದೇವಪ್ಪ ದೇವಿ ಮಡಿಲಲ್ಲಿ ಇಟ್ಟು ಪೂಜೆ ಸಲ್ಲಿಸಿದ್ದಾರೆ.ಕಳೆದ ವರ್ಷ ನಡೆದ ಜಾತ್ರೆಗೆ ಬರುವುದಾಗಿ ಹೇಳಿ ಕೊನೆ ಕ್ಷಣದಲ್ಲಿ ಡಿಕೆಶಿ ಬಂದಿರಲಿಲ್ಲ.. ಹೀಗಾಗಿ ದೇವಿ ಮುನಿಸಿಕೊಂಡಿದ್ದಾಳೆ ಅನ್ನೋ ಮಾತು ಭಕ್ತ ವಲಯದಲ್ಲಿ ಕೇಳಿ ಬಂದಿತ್ತು.. ಹೀಗಾಗಿ ಮಂದಿರ ಅರ್ಚಕ ಮಹಾದೇವಪ್ಪ ಪೂಜಾರಿ ಕೈಯಲ್ಲಿ ಪತ್ರ ಬರೆದು ಕೊಟ್ಟಿರೋ ಡಿಕೆಶಿ, ಮುಂದಿನ ವರ್ಷ ನಡೆಯೋ ಜಾತ್ರೆಗೆ ಬರೋದಾಗಿ ತಿಳಿಸಿದ್ದಾರೆ.