‘ಮೋದಿ ಅಂಥಹವರು ದೇಶಕ್ಕೆ ಬೇಕು’ ಮತ್ತೆ ನಮೋ ಗುಣಗಾನ ಮಾಡಿದ ಜಿಟಿ ದೇವೇಗೌಡ

ಜಿಟಿ ದೇವೇಗೌಡ ಮತ್ತೆ ಮೋದಿಯನ್ನು ಗುಣಗಾನ ಮಾಡಿದ್ದಾರೆ.

ಮೈಸೂರಿನಲ್ಲಿ ಮಾಜಿ ಸಚಿವ ಜಿಟಿಡಿ ಬೆಳ್ಳಂಬೆಳಿಗ್ಗೆ ಉಸ್ತುವಾರಿ ಸಚಿವ ವಿ ಸೋಮಣ್ಣ ಜೊತೆ ಕಾಣಿಸಿಕೊಂಡು ಮೋದಿಯನ್ನು ಸಮರ್ಥಿಸಿಕೊಂಡಿದ್ದಾರೆ.

ವಿ ಸೋಮಣ್ಣ ಜೊತೆ ಒಡನಾಟದ ಬಗ್ಗೆ ವಿಶ್ಲೇಷಣೆ ನೀಡಿದ ಜಿಟಿಡಿ . ನರೇಂದ್ರ ಮೋದಿ ಅವ್ರು ದೇಶದ ವ್ಯಕ್ತಿ. ಅಂಥಹವರು ದೇಶಕ್ಕೆ ಬೇಕು. ಅವರು ದೇಶದ ಅಭಿವೃದ್ಧಿಯತ್ತ ನೋಡುತ್ತಿದ್ದಾರೆ. ಮೊದಲು ದೇಶ ನಂತ್ರ ಬೇರೆಲ್ಲಾ ಎಂಬ ಭಾವನೆ ಇರುವವರು. ಅವರ ಒಳ್ಳೆಯ ಕೆಲ್ಸ ಮಾಡಿದ್ದಾರೆ. ಅವರ ಬಗ್ಗೆ ಒಂದು ಒಳ್ಳೆ ಮಾತಾಡಿದ್ರೆ ಬಿಜೆಪಿ ಅಂತಾ ಹೇಳ್ತಾರೆ.

36 ಸಾವೀರ ಓಟ್ಗಳ ಅಂತರದಲ್ಕಿ ಗೆದ್ದಾಗ, ಸಚಿವ ಸ್ಥಾನ ತಗೊಳೋಕೆ ಮುನಿಸಿಕಟ್ಟಿಕೊಂಡು ಒಂದು ತಿಂಗಳು ಹೆಣಗಾಡಬೇಕು. ಮೈತ್ರಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ಪಡೆಯಲು ಅನುಭವಿಸಿದ ನೋವನ್ನ ತೆರೆದಿಟ್ಟರು. ಆದ್ರೆ ಬಿಎಸ್ವೈ ಸಿಎಂ ಆಗಿದ್ದಾಗ ನಾನು ಸೋತಿದ್ದೆ. ಆಗ ನನ್ನನ್ನ ಮನೆಗೆ ಕರೆಸಿ ಯಡಿಯೂರಪ್ಪ ನನಗೆ ಗೃಹಮಂಡಲಿ ಅಧ್ಯಕ್ಷ ಸ್ಥಾನ ಕೊಟ್ರು.

ಆಗ ಸೋಮಣ್ಣ ವಸತಿ ಸಚಿವಾರಾಗಿದ್ರು. ಇದು ಕಾಕತಳಿಯ ಇಗಾ ಅವರೇ ಉಸ್ತುವಾರಿ ಸಚಿವರಾಗಿದ್ದಾರೆ. ಅವರ ನನ್ನ ಸ್ನೇಹ ಚೆನ್ನಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights