ಮೋದಿಯವರ ವ್ಯಂಗ್ಯಚಿತ್ರದ ಬ್ಯಾನರ್ : ರಜತ್ ಉಳ್ಳಾಗಡ್ಡಿಮಠ ವಿರುದ್ಧ ಎಫ್‌ಐಆರ್‌

ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವ್ಯಂಗ್ಯಚಿತ್ರದ ಬ್ಯಾನರ್ ಹಾಕಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.
ಹು- ಧಾ ಮಹಾನಗರ ಪಾಲಿಕೆ ಉಪ‌ ಆಯುಕ್ತ ಪ್ರಕಾಶ್ ಗಾಳೆಮ್ಮನವರ್‌ರಿಂದ ದೂರು ದಾಖಲಿಸಲಾಗಿದೆ. ಮಹಾನಗರ ಪಾಲಿಕೆ ಅನುಮತಿ ಪಡೆಯದೆ ಅವಹೇಳನಕಾರಿ ಬ್ಯಾನರ್ ಹಾಕಿದ್ದಾರೆಂದು ದೂರು ನೀಡಲಾಗಿದೆ.

ಪ್ರಧಾನಿಗಳು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಕಣ್ಣೀರು ಒರೆಸಿಲ್ಲ. ಚಂದ್ರಯಾನ-2 ವೀಕ್ಷಣೆಗೆ ಆಗಮಿಸುತ್ತಿದ್ದಾರೆಂದು ಬ್ಯಾನರ್‌ನಲ್ಲಿ ಬರೆಯಲಾಗಿತ್ತು. ರೆಡ್‌ಕಾರ್ಪೇಟ್ ಮೇಲೆ ನರೇಂದ್ರ ಮೋದಿಯವರು ನಡೆದುಬರುವ ವ್ಯಂಗ್ಯಚಿತ್ರ ಬಿಡಿಸಲಾಗಿತ್ತು. ಈ ಕುರಿತು ಓಪನ್‌ಪ್ಲೇಸಸ್ ಡಿಸ್ಪಿಗರ್ಮೆಂಟ್ ಕಾಯ್ದೆ, ಐಪಿಸಿ ಸೆಕ್ಷನ್ 34ರ ಅಡಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಠಾಣೆಗೆ ಹಾಜರಾಗುವಂತೆ ರಜತ್ ಉಳ್ಳಾಗಟ್ಟಿಮಠಗೆ ನೋಟೀಸ್ ಜಾರಿ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights