ಮೋದಿಯವರ ವ್ಯಂಗ್ಯಚಿತ್ರದ ಬ್ಯಾನರ್ : ರಜತ್ ಉಳ್ಳಾಗಡ್ಡಿಮಠ ವಿರುದ್ಧ ಎಫ್ಐಆರ್
ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವ್ಯಂಗ್ಯಚಿತ್ರದ ಬ್ಯಾನರ್ ಹಾಕಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಹು- ಧಾ ಮಹಾನಗರ ಪಾಲಿಕೆ ಉಪ ಆಯುಕ್ತ ಪ್ರಕಾಶ್ ಗಾಳೆಮ್ಮನವರ್ರಿಂದ ದೂರು ದಾಖಲಿಸಲಾಗಿದೆ. ಮಹಾನಗರ ಪಾಲಿಕೆ ಅನುಮತಿ ಪಡೆಯದೆ ಅವಹೇಳನಕಾರಿ ಬ್ಯಾನರ್ ಹಾಕಿದ್ದಾರೆಂದು ದೂರು ನೀಡಲಾಗಿದೆ.
ಪ್ರಧಾನಿಗಳು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಕಣ್ಣೀರು ಒರೆಸಿಲ್ಲ. ಚಂದ್ರಯಾನ-2 ವೀಕ್ಷಣೆಗೆ ಆಗಮಿಸುತ್ತಿದ್ದಾರೆಂದು ಬ್ಯಾನರ್ನಲ್ಲಿ ಬರೆಯಲಾಗಿತ್ತು. ರೆಡ್ಕಾರ್ಪೇಟ್ ಮೇಲೆ ನರೇಂದ್ರ ಮೋದಿಯವರು ನಡೆದುಬರುವ ವ್ಯಂಗ್ಯಚಿತ್ರ ಬಿಡಿಸಲಾಗಿತ್ತು. ಈ ಕುರಿತು ಓಪನ್ಪ್ಲೇಸಸ್ ಡಿಸ್ಪಿಗರ್ಮೆಂಟ್ ಕಾಯ್ದೆ, ಐಪಿಸಿ ಸೆಕ್ಷನ್ 34ರ ಅಡಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಠಾಣೆಗೆ ಹಾಜರಾಗುವಂತೆ ರಜತ್ ಉಳ್ಳಾಗಟ್ಟಿಮಠಗೆ ನೋಟೀಸ್ ಜಾರಿ ಮಾಡಲಾಗಿದೆ.