ಮುಖ್ಯಮಂತ್ರಿಗಳ ಹಾವೇರಿ ಜಿಲ್ಲಾ ಪ್ರವಾಸ ವೇಳೆ ಅಧಿಕಾರಿಗಳ ಎಡವಟ್ಟು….

ಮುಖ್ಯಮಂತ್ರಿಗಳ ಹಾವೇರಿ ಜಿಲ್ಲಾ ಪ್ರವಾಸ ವೇಳೆ ಅಧಿಕಾರಿಗಳ ಎಡವಟ್ಟು ಮಾಡಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕುಣಿಮೆಳ್ಳಿಹಳ್ಳಿ ಗ್ರಾಮದ ವರದಾ ನದಿ ಸೇತುವೆ ಮೇಲೆ ಸಂಚಾರ ನಿಷೇಧ ಮಾಡಿದ್ದರೂ, ಶೀತಿಲಗೊಡ ಸೇತುವೆ ಮೇಲೆ ಬಿ ಎಸ್ ವೈ ಪ್ರಯಾಣ ಮಾಡಿದ್ದಾರೆ.

ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾಗಿದ್ದ ಸೇತುವೆ ನಿಷೇಧದ ನಡುವೆಯೂ ಹತ್ತಾರು ವಾಹನಗಳು ಸೇತುವೆ ಮೇಲೆ ಸಂಚಾರ ಮಾಡಿದ್ದಾರೆ.

ಸೇತುವೆ ಶೀತಲಗೊಂಡ ಹಿನ್ನೆಲೆ ಸಂಚಾರಕ್ಕೆ ನಿಷೇಧ ಹೇರಿ ಲೋಕೋಪಯೋಗಿ ಇಲಾಖೆಯಿಂದ ಆದೇಶ ಹೊರಡಿಸಿತ್ತು.  ಜೊತೆಗೆ ಇಲಾಖೆಯಿಂದ ಸೇತುವೆ ಮುಂಭಾಗದಲ್ಲಿ ಬೋರ್ಡ್ ಕೂಡ ಹಾಕಲಾಗಿದೆ. ಆದರೂ ಕೂಡ ಸಿಎಂ ಈ ಸೇತುವೆ ಮೇಲೆ ಸಂಚಾರ ಮಾಡಲು ಅವಕಾಶ ನೀಡಲಾಗಿದೆ.

ನಿಷೇಧವಿರುವ ೀ ಸೇತುವೆ ಮೇಲೆ ಪ್ರಯಾಣ ಮಾಡುವಾಗ ೇನಾದ್ರೂ ಹೆಚ್ಚು ಕಡಿಮೆಯಾಗಿದ್ದರೆ ಯಾರು ಹೊಣೆ ಎನ್ನುವ ಪ್ರಶ್ನೆ ಎದ್ದಿದ್ದು, ಇಂತಹ ಸೂಕ್ಷ್ಮ ವಿಚಾರಗಳು ಕೆಲವು ಬಾರಿ ಕಣ್ಮರೆಯಾಗುವುದು ವಿಪರ್ಯಾಸ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights