ಮಾಜಿ ಸಚಿವರ ಸಂಬಂಧಿಯಿಂದ ಬಡ ರೈತ ಕುಟುಂಬದ ಮೇಲೆ ದೌರ್ಜನ್ಯ…
ಮಾಜಿ ಸಚಿವ ಚಲುವರಾಯಸ್ವಾಮಿ ಸಹೋದರ ಸಂಬಂಧಿಯಿಂದ ಬಡ ರೈತ ಕುಟುಂಬದ ಮೇಲೆ ದೌರ್ಜನ್ಯ ಮಾಡಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಇಜ್ಜಲಘಟ್ಟದಲ್ಲಿ ನಡೆದಿದೆ.
ಇಜ್ಜಲಘಟ್ಟದ ಬಡ ರೈತ ಮಾಯಿಗೌಡ ಎಂಬುವರ ರೈತ ಕುಟುಂಬದ ಮೇಲೆ ಕಲ್ಲು ಕ್ವಾರೆಯಿಂದ ಜಮೀನಿನ ಬೆಳೆ ಹಾಳಾಗುತ್ತಿರುವುದನ್ನು ಪ್ರಶ್ನಿಸಿದಕ್ಕೆ ದೌರ್ಜನ್ಯ ಮಾಡಲಾಗಿದೆ. ಚಲುವರಾಯಸ್ವಾಮಿ ಅಣ್ಣನ ಮಗ ಉಮೇಶ್ ಹಾಗೂ ಅವರ ಸಂಬಂಧಿಕರಿಂದ, ಕ್ವಾರೆ ಪಕ್ಕದಲ್ಲಿದ್ದ ಜಮೀನಿನಲ್ಲಿ ರೈತ ಕುಟುಂಬ ಬೆಳೆದಿದ್ದ ಬೆಳೆ ಮತ್ತು ಹನಿ ನೀರಾವರಿ ಪೈಪ್ಲೈನ್ ಕಿತ್ತು ರೈತ ಕುಟುಂಬಕ್ಕೆ ಹಲ್ಲೆ ನಡೆಸಿ ಧಮಕಿ ಹಾಕಲಾಗಿದೆ.
ಕ್ವಾರೆ ಬಗ್ಗೆ ಪ್ರಶ್ನೆ ಮಾಡಿದ ಬಡ ರೈತ ಕುಟುಂಬದ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆಗೆ ಯತ್ನ ಮಾಡಲಾಗಿದೆ.
ಚಲುವರಾಯಸ್ವಾಮಿ ಸಂಬಂಧಿಕರಾದ ಕಾರಣಕ್ಕೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರ ಹಿಂದೇಟು ಹಾಕುತ್ತಿದ್ದಾರೆ ಎಂದು ರೈರ ಆರೋಪಿಸಿದ್ದಾರೆ. ಚಲುವರಾಯಸ್ವಾಮಿ ಸಂಬಂಧಿಕರ ದೌರ್ಜನ್ಯದ ವಿರುದ್ದ ಬಡ ರೈತ ಕುಟುಂಬ ಕಂಗಾಲಾಗಿದೆ.