ಮಹಾಮಳೆಯಿಂದ ಜೀವ ಉಳಿದ ಹಿನ್ನೆಲೆ : ಗ್ರಾಮಸ್ಥರಿಂದ ದೇವಿಗೆ ಕೋಳಿ ಹರಕೆ

ಮಹಾಮಳೆಯಿಂದ ಜೀವ ಉಳಿದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಆಲೇಖಾನ್ ಗ್ರಾಮದ ಗುಳಿಗೆ ಚೌಡಿ ದೇವಿಗೆ ಕೋಳಿ ಹರಕೆ ತೀರಿಸಲಾಯ್ತು.

ಮೂಡಿಗೆರೆ ತಾಲೂಕಿನ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿ ಗ್ರಾಮಸ್ಥರು ಕೋಳಿ ಹರಕೆ ನೀಡಿ ಪೂಜೆ ಸಲ್ಲಿಸಿದರು. ಮಹಾ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಆಲೇಖಾನ್ ಗ್ರಾಮಸ್ಥರ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಆದರೆ ಜೀವಕ್ಕೆ ಯಾವುದೇ ಹಾನಿಯಾಗಿರಲಿಲ್ಲ.

ಭಾರೀ ಗಾತ್ರದ ಗುಡ್ಡ ಕುಸಿತವಾದ್ರು ಪ್ರಾಣ ಹಾನಿಯಾಗಿರಲಿಲ್ಲ. ದೇವಿಯೇ ಪ್ರಾಣ ಉಳಿಸಿದ್ದಾಳೆಂಬುದು ನಂಬಿಕೆಯಿಂದ ಗ್ರಾಮದ ಗುಳಿಗೆ ಚೌಡಿಗೆ ವಿಶೇಷ ಪೂಜೆ ಸಲ್ಲಿಸಿದರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights