ಮದುವೆ ಆಮಂತ್ರಣ ಪತ್ರಿಕೆ ಕೊಡಲು ಹೋಗಿದ್ದ ತಂದೆ ಮಗ ಮಸಣ ಸೇರಿದ್ರು…!

ಮದುವೆ ಆಮಂತ್ರಣ ಪತ್ರಿಕೆ ಕೊಡಲು ಹೋಗಿದ್ದ ತಂದೆ ಮಗ ಧಾರುಣವಾಗಿ ಸಾವನ್ನಪ್ಪಿದ ಘಟನೆ ಕೆಜಿಎಪ್ ಹೊರವಲಯದ ಕೋಡಿಯಪಲ್ಲಿ ಕುಪ್ಪಂ‌ ರಸ್ತೆಯಲ್ಲಿ ನಡೆದಿದೆ.

ತಂದೆ ವೆಂಕಟೇಶ್ ( 57)  ಮಗ ಕನಕರಾಜ್ (27 ) ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಕೆಜಿಎಪ್ ಹೊರವಲಯದ ಕೋಡಿಯಪಲ್ಲಿ ಕುಪ್ಪಂ‌ ರಸ್ತೆಯಲ್ಲಿ ಈ  ಘಟನೆ ನಡೆದಿದೆ. ಹಿರಿಯ ಸಹೋದರ ರವಿ  ಮದುವೆ ಆಮಂತ್ರಣ ನೀಡಲು ಹೋಗಿದ್ದ  ವೇಳೆ ಈ ಘಟನೆ ನಡೆದಿದೆ.

ಸ್ಥಳಕ್ಕೆ ಮಾರಿಕುಪ್ಪಂ ಪೊಲೀಸರು ಭೇಟಿ ಪರಿಶೀಲನೆ ಮಾಡುತ್ತಿದ್ದಾರೆ. ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights