ಮಂಡ್ಯ ಜನ್ರ ಸ್ವಾಭಿಮಾನ ಕೆಣಕಿದ ಹೆಚ್.ಡಿ ಕುಮಾರಸ್ವಾಮಿಗೆ ರವೀಂದ್ರ ತಿರುಗೇಟು…..
ಮಂಡ್ಯ ಜನ್ರ ಸ್ವಾಭಿಮಾನ ಕೆಣಕಿದ hdk ಕೆಣಕಿದ hdk ಗೆ ರವೀಂದ್ರ ತಿರುಗೇಟು ಕೊಟ್ಟಿದ್ದಾರೆ. ಹೌದು.. ಹೆಚ್ಡಿಕೆ ವಿರುದ್ದ ಸುಮಲತಾ ಬೆಂಬಲಿಗ ಡಾ.ರವೀಂದ್ರ ವಾಗ್ದಾಳಿ ಮಾಡಿದ್ದಾರೆ.
ಮಂಡ್ಯದ ಸ್ವಾಭಿಮಾನಿಗಳು ಎಲ್ಲೋದ್ರು ಎಂದು ಕೇಳಿದ್ದ ಹೆಚ್ಡಿಕೆ ಪ್ರಶ್ನೆ ಮಾಡಿದ್ದರು. ಇಂತಹ ವ್ಯಂಗ್ಯ ಭರಿತ ಮಾತುಗಳನ್ನ ನಿಲ್ಲಿಸುವಂತೆ ರವೀಂದ್ರ ತಾಕೀತು ಮಾಡಿದ್ದಾರೆ. ಈ ರೀತಿಯ ವ್ಯಂಗ್ಯ ಭರಿತ ಮಾತುಗಳಿಗೆ ಚುನಾವಣೆ ಉತ್ತರ ಕೊಟ್ಟಿದೆ. ಹೆಚ್ಡಿಕೆ ಅವರೇ ನೇರ ಕಾರಣ. ಕಬ್ಬು ಬೆಳೆಗಾರರ ಸಮಸ್ಯೆಗೆ, ಮಂಡ್ಯ ಸಕ್ಕರೆ ಕಾರ್ಖಾನೆಗಳ ದುಸ್ಥಿತಿಗೆ ಹೆಚ್ಡಿಕೆ ಕಾರಣ. ಒಬ್ಬ ಮಾಜಿ ಸಿಎಂ ಆಗಿ ಈ ರೀತಿ ಹೇಳಿಕೆ ನೀಡಬಾರದು.
14 ತಿಂಗಳ ಆಡಳಿತ ನಡೆಸಿದ ನಿಮ್ಮಿಂದಲೇ ಈ ದುಸ್ಥಿತಿ. ಅಧಿಕಾರದಲ್ಲಿದ್ದಾಗ ಕಾರ್ಖಾನೆ ಆರಂಭಕ್ಕೆ, ಕಬ್ಬು ನುರಿಸುವ ಕ್ರಮ ಕೈಗೊಳ್ಳಲಿಲ್ಲ. ಕೋತಿ ತಾನು ತಿಂದು, ಮೇಕೆ ಬಾಯಿಗೆ ಒರೆಸಿದಂತೆ. ತಾವು ತಪ್ಪು ಮಾಡಿ, ಬೇರೆಯವರ ಮೇಲೆ ಆರೋಪ ಸರಿಯಲ್ಲ. ಹೊಸ ಸಕ್ಕರೆ ಕಾರ್ಖಾನೆ ಅಂದಿದ್ರಿ ಅದಕ್ಕೆ ಅಗತ್ಯ ಕ್ರಮ ವಹಿಸಲೇ ಇಲ್ಲ. ಇವಾಗ ಬಂದು ಮಂಡ್ಯ ನನ್ನ ರಕ್ತದಲ್ಲಿದೆ ಅಂತೀರಾ.
ಸ್ವಾಭಿಮಾನಿಗಳು ಎಲ್ಲೋದ್ರು ಅಂತಾ ಕೇಳ್ತೀರಾ. ಸ್ವಾಭಿಮಾನಿಗಳು ಕೇವಲ ಸಂಸದರು ಮಾತ್ರವಲ್ಲ. ಸುಮಲತಾರಿಗೆ ಓಟ್ ಮಾಡಿದ ಎಲ್ಲರೂ ಜಿಲ್ಲೆಯ ಮತದಾರರು ಸ್ವಾಭಿಮಾನಿಗಳೇ. ಅನವಶ್ಯಕವಾಗಿ ಜಿಲ್ಲೆಯ ಜನ್ರ ಸ್ವಾಭಿಮಾನಿಗಳನ್ನ ಕೆಣಕಬೇಡಿ. ಸ್ವಾಭಿಮಾನಿಗಳನ್ನ ಪ್ರಶ್ನೆ ಮಾಡುವ ಮುನ್ನಾ, ತಮ್ಮ ಪಕ್ಷದ 8 ಶಾಸಕರು ಏನ್ಮಾಡ್ತಿದ್ದಾರೆ ಹೇಳಿ? ಎಂದು ಪ್ರಶ್ನಿಸಿದ್ದಾರೆ.