ಭೀಮಾ ತೀರದಲ್ಲಿ ಹಂತಕ ಧರ್ಮರಾಜ ಚಡಚಣ ಹವಾ…
ವಿಜಯಪುರ ಭೀಮಾ ತೀರದಲ್ಲಿ ಹಂತಕ ಧರ್ಮರಾಜ ಚಡಚಣ ಹವಾ ಹೆಚ್ಚಾಗಿದೆ.
ಎನಕೌಂಟರ್ ನಲ್ಲಿ ಬಲಿಯಾದರೂ ಧರ್ಮರಾಜ ಚಡಚಣ ಹವಾ ಮುಂದವರಿಕೆಯಾಗಿದೆ. ಧರ್ಮರಾಜ ಚಡಚಣ ಕಟೌಟ್ ಗೆ ಬೆಂಬಲಿಗರು ಹಾಲಿನ ಅಭಿಷೇಕ ಮಾಡಿದ್ದಾರೆ.
ಹೌದು.. ಇದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಬಸವೇಶ್ವರ ಜಾತ್ರೆಯಲ್ಲಿ ನಡೆದ ಘಟನೆ. ಅಂದಿನ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣ ಪಿಎಸ್ಐ ಗೋಪಾಲ ಹಳ್ಳೂರ ಸುಮಾರು ಎರಡು ವರ್ಷಗಳ ಹಿಂದೆ ಧರ್ಮರಾಜ ಚಡಚಣನನ್ನು ಎನಕೌಂಟರ್ನಲ್ಲಿ ಹತ್ಯೆ ಮಾಡಿದ್ದರು.
ಭೀಮಾ ತೀರದಲ್ಲಿ ಧರ್ಮರಾಜ ಚಡಚಣ ಅಧ್ಯಾಯ ಮುಗಿದರೂ ಬೆಂಬಲಿಗರಿಂದ ಹವಾ ಮಾತ್ರ ಿನ್ನೂ ಕಡಿಮೆಯಾಗಿಲ್ಲ. ಜಾತ್ರೆಯಲ್ಲಿ ಹಂತಕ ಧರ್ಮರಾಜ ಚಡಚಣ ಫೋಟೋ ಸ್ವಾಗತಕ್ಕಾಗಿ ಹಾಕಲಾಗಿದೆ.