ಭಾರೀ ಪ್ರಮಾಣದಲ್ಲಿ ಭೂ ಕುಸಿತ : ಮಲೆನಾಡು ಪ್ರದೇಶಕ್ಕೆ ಭೂ ವಿಜ್ಞಾನಿಗಳ ಭೇಟಿ

ಚಿಕ್ಕಮಗಳೂರು ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿರುವ ಹಿನ್ನೆಲೆಯಲ್ಲಿ ಭೂ ವಿಜ್ಞಾನಿಗಳು ಭೇಟಿ ನೀಡಿದರು.

ಹೌದು… ಪ್ರವಾಹ ಪೀಡಿತ ಪ್ರದೇಶಗಳ ಪೈಕಿ ಚಿಕ್ಕಮಗಳೂರು ಸಂತ್ರಸ್ತರು ಅಪಾರ ಆಸ್ತಿ-ಪಾಸ್ತಿ ಹಾನಿಗೊಳಗಾಗಿದೆ. ಅತೀ ಹೆಚ್ಚು ಮಳೆ ಬೀಳುವುದರಿಂದ ರಸ್ತೆ, ಮನೆಗಳ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾಗಿದೆ. ಸಾಕಷ್ಟು ಸಾವು ನೋವು ಸಂಭವಿಸಿದೆ.

ಹೀಗಾಗಿ ಅಧಿಕ ಭೂ ಕುಸಿತವಾಗಿರುವ ಪ್ರದೇಶಗಳಿಗೆ ಭಾರತೀಯ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳು ಭೇಟಿ ನೀಡಿದರು.

ಚಾರ್ಮಾಡಿ ಘಾಟ್, ಆಲೇಖಾನ್, ಮಲೆಮನೆ,ದುರ್ಗದಹಳ್ಳಿ ಸೇರಿದಂತೆ ಇತರೆ ಮಲೆನಾಡು ಪ್ರದೇಶದಲ್ಲಿ ಅಧ್ಯಯನ ನಡೆಸಿದರು. ಯಾವ ಕಾರಣಕ್ಕಾಗಿ ಭೂ ಕುಸಿತವಾಗಿದೆ, ಮಳೆ ಕಾರಣವೂ ಅಥವಾ ಭೂ ಕಂಪನವೂ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ಸಮಗ್ರ ವರದಿ‌‌ ನೀಡಲಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights