ಭಾರತ ಸಂವಿಧಾನ ಪುಸ್ತಕದ ಮೇಲೆ ಆಣೆಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ವಧುವರರು…!

ಮದುವೆ ಅಂದ್ರೆ ಅಗ್ನಿ ಸಾಕ್ಷಿಯಾಗಿ ವರ ಮಧುವಿನ  ಕೈ ಹಿಡಿಯುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಗುರು ಹಿರಿಯರ ಸಾಕ್ಷಿಯಾಗಿ ಬಾಳ ಸಂಗಾತಿಯೊಂದಿಗೆ  ಸಪ್ತಪದಿ ತುಳಿಯುವುದನ್ನ ನಾವು ತಿಳಿದಿದ್ದೇವೆ. ಆದರೆ ಇಲ್ಲೊಂದು ಮದುವೆ ವಿಶೇಷವಾಗಿ ನಡೆದಿದೆ.

ಹೌದು… ಭಾರತ ಸಂವಿಧಾನದ ಪುಸ್ತಕದ ಮೇಲೆ ಆಣೆಮಾಡಿ ನವ ವಧುವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಶೇಷ ಮದುವೆಯೊಂದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ನಡೆದಿದೆ.

ಅಂಬೇಡ್ಕರ್ ಬರೆದ ಸಂವಿಧಾನದ ಪುಸ್ತಕದ ಮೇಲೆ ಆಣೆ ಮಾಡಿದ ಸುನೀಲ್ – ರೂಪಾ ಹಾಗೂ ಮಂಜುನಾಥ್-ಪುಷ್ಪ ದಂಪತಿಗಳ ಮದುವೆ ನವಂಬರ್ ೧೦ ರಂದು ಕರಿಬಸವೇಶ್ವರ ದೇವಸ್ಥಾನದಲ್ಲಿ ನಡೆದಿದೆ.

ಉಕ್ಕಡಗಾತ್ರಿ ಗ್ರಾಮದ ಸುಮಂಗಳಮ್ಮ ಹಾಗೂ ಸುರೇಶ್ ದೊಡ್ಡಮನಿಯ ಪುತ್ರ ಹಾಗೂ ಪುತ್ರಿಯ ಮಧುವೆ ಸಮಾರಂಭದಲ್ಲಿ ಬಂಧುಗಳ ಸಮ್ಮುಖದಲ್ಲಿ ಅಂಬೇಡ್ಕರ್ ಪುಸ್ತಕದ ಮೇಲೆ ಆಣೆ ಮಾಡಿದ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ವಿಶೇಷವಾಗಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights