ಬಿಹಾರದಲ್ಲಿ ನೆರೆ ಸಂತ್ರಸ್ತರಿಗೆ ಅನುಕಂಪ, ರಾಜ್ಯಕ್ಕೆ ಸ್ಪಂದಿಸದ ಮೋದಿ – ಸಿದ್ದರಾಮಯ್ಯ ಕಿಡಿ
ಬಿಹಾರದಲ್ಲಿ ನೆರೆ ಸಂತ್ರಸ್ತರ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಭೀಕರ ಆವರಿಸಿದರೂ ಸ್ಪಂದಿಸದೆ ಇರುವ ತಾರತಮ್ಯಕ್ಕೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಇಂದು ರಾಯಚೂರಿನಲ್ಲಿ ಮಾತನಾಡಿ ೨೦೦೯ ಕ್ಕಿಂತ ಭೀಕರ ನೆರೆ ಬಂದಿದೆ. ರಾಜ್ಯ ಸರಕಾರ ನೆರೆ ಪರಿಹಾರಕ್ಕೆ ಸ್ಪಂದಿಸುತ್ತಿಲ್ಲ, ಈ ಭಾಗದಲ್ಲಿ ಭೀಕರ ನೆರೆ ಇರುವದರಿಂದ ಬೆಳಗಾವಿಯಲ್ಲಿ ಅಧಿವೇಶನ ಕರೆಯಲು ಒತ್ತಾಯಿಸಿದ್ದೆ ಆದರೆ ಕಾಟಾಚಾರಕ್ಕೆ ಬಜೆಟ್ ಅನುಮೋದನೆಗಾಗಿ ಮೂರು ದಿನ ಅಧಿವೇಶನವನ್ನು ಮುಖ್ಯಮಂತ್ರಿ ಗಳು ಕರೆದಿದ್ದಾರೆ, ನೆರೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಬೆಳಗಾವಿ ಅಧಿವೇಶನ ಕರೆಯಲು ಆಗುತ್ತಿಲ್ಲ ಎಂದು ಸಾಬೂಬು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಅನರ್ಹ ಶಾಸಕರಿಗೆ ಅಮಿತ್ ಷಾ ಬಿಜೆಪಿ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ, ಈಗ ಅವರಲ್ಲಿ ಗೊಂದಲವಿದೆ, ಅತಂತ್ರವಾಗಿರುವ ಅನರ್ಹ ಶಾಸಕರು ಮತ್ತೆ ವಾಪಸ್ಸು ಕಾಂಗ್ರೆಸ್ಸಿಗೆ ಬರುವವ ಬಗ್ಗೆ ಆಸಕ್ತಿ ವಹಿಸಿದರೂ ನಾನು ಸದನದಲ್ಲಿಯೇ ಹೇಳಿದ್ದೇನೆ, ಯಾವುದೇ ಕಾರಣಕ್ಕೂ ವಾಪಸ್ಸು ಕರೆದುಕೊಳ್ಳುವುದಿಲ್ಲ ಎಂದು ಹೇಳಿದರು.