ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ನಾಳೆ ಸಿಎಂ ಬಿಎಸ್ವೈ ಭೇಟಿ..
ನಾಳೆ ಸಿಎಂ ಬಿಎಸ್ವೈ ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅಂತೆಯೇ ಅವರ ಸ್ಥಳ ವೀಕ್ಷಣೆ ವೇಳಾ ಪಟ್ಟಿ ಇಂತಿದೆ.
ನಾಳೆ ಮಧ್ಯಾಹ್ನ ೨ಕ್ಕೆ ಸಿಎಂ ಬಿ ಎಸ್ ಯಡಿಯೂರಪ್ಪ ಹಿಪ್ಪರಗಿ ಬ್ಯಾರೇಜ್ ವೀಕ್ಷಣೆ ಮಾಡಲಿದ್ದಾರೆ. ಮಧ್ಯಾಹ್ನ ೨:೪೫ಕ್ಕೆ ಮುಧೋಳ ತಾಲೂಕಿನ ಯಾದವಾಡ-ಮುಧೋಳ ಸೇತುವೆ ವೀಕ್ಷಣೆ, ಮಧ್ಯಾಹ್ನ ೩:೧೫ಕ್ಕೆ ಮುಧೋಳ ತಾಲೂಕಿನ ಚಿಚಖಂಡಿ ಸೇತುವೆ,ಬೆಳೆ ಹಾನಿ ವೀಕ್ಷಣೆ ಮಾಡಲಿದ್ದಾರೆ.
ಸಾಯಂಕಾಲ ೪:೩೦ಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರವಾಹ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ವಿಜಯಪುರ ಜಿಲ್ಲೆ ಆಲಮಟ್ಟಿಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ.