ಬಾಗಲಕೋಟೆ ಜಿಲ್ಲೆಯಲ್ಲಿ ಕೈ ಶಾಸಕರಿಗೆ ಅನುದಾನಕ್ಕೆ ಖೋತಾ.. ಬಿಜೆಪಿ ಶಾಸಕರಿಗೆ ಬಂಪರ್!?

ಬಾಗಲಕೋಟೆ ಜಿಲ್ಲೆಯಲ್ಲಿ ಕೈ ಶಾಸಕರಿಗೆ ಅನುದಾನಕ್ಕೆ ಖೋತಾ ಹೊಡೆದು ಬಿಜೆಪಿ ಶಾಸಕರಿಗೆ ಬಂಪರ್ ನೀಡಿದ್ದಾರೆ ಬಿಎಸ್ ವೈ.

ಹೌದು…  ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದ ಅನುದಾನಕ್ಕೂ ಖೋತಾ ಹೊಡೆದು ಸಿದ್ದರಾಮಯ್ಯಗೂ ಬಿಎಸ್ವೈ ಬಿಗ್ ಶಾಕ್ ಕೊಟ್ಟಿದ್ದಾರಾ ಬಿಎಸ್ ವೈ. ಸಿದ್ದರಾಮಯ್ಯ ಕ್ಷೇತ್ರಕ್ಕೆ ಹಂಚಿಕೆಯಾಗಿದ್ದ ಅನುದಾನಕ್ಕೆ ಬ್ರೇಕ್ ಹಾಕಿದ್ದು, ಸದ್ಯ ಹಾಲಿ ಸಿಎಂ-ಮಾಜಿ ಸಿಎಂ ಮಧ್ಯೆ ಟಾಕ್ ವಾರ್ ನಡೆಯುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಕ್ಷೇತ್ರಕ್ಕೆ ಮೈತ್ರಿ ಸರ್ಕಾರದಲ್ಲಿ  ರಸ್ತೆ ಕಾಮಗಾರಿ,ಚರಂಡಿ ನಿರ್ಮಾಣಕ್ಕೆ ಅನುಮೋದನೆಗೊಂಡಿದ್ದ ಬರೋಬ್ಬರಿ 35ಕೋಟಿ ಖೋತಾ ಮಾಡಲಾಗಿದೆ. ಕೈ ಶಾಸಕ ಆನಂದ್ ನ್ಯಾಮಗೌಡ ಜಮಖಂಡಿ ಕ್ಷೇತ್ರಕ್ಕೆ ಅನುಮೋದನೆಗೊಂಡಿದ್ದ ೭ಕೋಟಿ ಸ್ಥಗಿತಕ್ಕೆ ಆದೇಶ ಹೊರಡಿಸಲಾಗಿದೆ. ಅದಕ್ಕಾಗಿ ಅನುದಾನ ಹಂಚಿಕೆಯಲ್ಲೂ ಸಿಎಂ ಬಿಎಸ್ವೈ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಸೆ,೬ರಂದು ಬಿಎಸ್ವೈ ಅನುದಾನ ಹಂಚಿಕೆಯಲ್ಲೂ ತಾರತಮ್ಯ. ಬಾಗಲಕೋಟೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರ ಮುಧೋಳಕ್ಕೆ ೧೭ಕೋಟಿ,ಸಿದ್ದು ಸವದಿ ತೇರದಾಳ ಕ್ಷೇತ್ರ ೧೫ಕೋಟಿ, ಮುರುಗೇಶ್ ನಿರಾಣಿ ಬೀಳಗಿ ಕ್ಷೇತ್ರಕ್ಕೆ ೧೭ಕೋಟಿ,ಶಾಸಕ ವೀರಣ್ಣ ಚರಂತಿಮಠ ಬಾಗಲಕೋಟೆ ಕ್ಷೇತ್ರಕ್ಕೆ ೧೫ಕೋಟಿ,ಶಾಸಕ ದೊಡ್ಡನಗೌಡ ಪಾಟೀಲ್ ಹುನಗುಂದ ಕ್ಷೇತ್ರಕ್ಕೆ ೧೪ಕೋಟಿ ಬಂಪರ್ ಅನುದಾನ ನೀಡಲಾಗಿದೆ.

ಆದರೆ ಕೈ ಶಾಸಕ ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ,ಕೈ ಶಾಸಕ ಆನಂದ್ ನ್ಯಾಮಗೌಡ ಕ್ಷೇತ್ರಕ್ಕೆ ಮಾತ್ರ ಅನುದಾನ ಬಿಡುಗಡೆ ಮಾಡಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights