ಬಂಡಿಪುರ ರಾತ್ರಿ ಸಂಚಾರ ನಿಷೇಧ ಮುಂದುವರೆಯಲೇಬೇಕೆಂದು ವಾಟಾಳ್ ಪ್ರತಿಭಟನೆ
ಬಂಡಿಪುರ ರಾತ್ರಿ ಸಂಚಾರ ನಿಷೇಧ ಮುಂದುವರೆಯಲೇ ಬೇಕು, ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅರಣ್ಯಭವನದ ಮುಂಭಾಗದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಸುಪ್ರೀಂಕೋರ್ಟ್ ನಿರ್ಧೇಶನದಂತೆ ನಾಗರಹೊಳೆ, ಕೊಡಗು, ಸುಲ್ತಾನ್ ಬತೇರಿ ಕಡೆಯಿಂದ ಬೇರೆ ಮಾರ್ಗ ಹುಡುಕಿಕೊಡುವ ಕುರಿತು ಕೇರಳ ಕಡೆಯಿಂದ ನಡೆಯುತ್ತಿದೆ. ಇದರ ಹಿಂದೆ ದೊಡ್ಡ ಮಾಫಿಯಾ ಗ್ಯಾಂಗ್ ಇದೆ. ಯಾವುದೇ ಕಾರಣಕ್ಕೂ ರಸ್ತೆ ಮಾರ್ಪಡಿಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಮನವಿ ಸ್ವೀಕರಿಸಿ ಯಾವುದೇ ಕಾರಣಕ್ಕೂ ಇದಕ್ಜೆ ಅವಕಾಶ ನೀಡುವುದಿಲ್ಲ, ಯಥಾಸ್ಥಿತಿ ಮುಂದುವರಿಸಲಾಗುವುದು ಎಂದು ತಿಳಿಸಿದರು.