ಪ್ರವಾಹ ಸಂತ್ರಸ್ತರ ತಾತ್ಕಾಲಿಕ ಚೆಕ್ ವಾಪಸ್ : ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಸ್ಪಷ್ಟನೆ

ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ನಲ್ಲಿ ಹಣವಿಲ್ಲವೆಂದು ಚೆಕ್ ಸ್ವೀಕರಿಸದ ಹಿನ್ನಲೆಯಲ್ಲಿ ತಾತ್ಕಾಲಿಕ ಪರಿಹಾರದ ಚೆಕ್ ಡ್ರಾ ಆಗದೆ ಕಂಗಾಲಾಗಿದ್ದಾರೆ ಪ್ರವಾಹ ಸಂತ್ರಸ್ತರು. ವಿಜಯಪುರದಲ್ಲಿ ಪ್ರವಾಹ ಸಂತ್ರಸ್ತರ ಪರಿಹಾರ ಚೆಕ್ ವಾಪಸ್ ಪ್ರಕರಣ ಕುರಿತು ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಸ್ಪಷ್ಟನೆ ನೀಡಿದ್ದಾರೆ.

ಪ್ರವಾಹ ಸಂತ್ರಸ್ಥರಿಗೆ ಯಾವುದೇ ತೊಂದರೆಯಾಗದು. ಸರಕಾರ ನೀಡಿರುವ ತಾತ್ಕಾಲಿಕ ಚೆಕ್ ಗಳಲ್ಲಿ ಒಂದೇ ಕುಟುಂಬಗಳಿಗೆ 2-3 ಚೆಕ್ ಹೋಗುತ್ತಿವೆ. ಒಂದೇ ಮನೆಯಲ್ಲಿ ತಂದೆ, ಮಗ, ಪತ್ನಿ, ಸೊಸೆ ಹೆಸರಲ್ಲಿ ಚೆಕ್ ನೀಡಲಾಗಿದೆ.

ಇಂಥ ಚೆಕ್ ಗಳನ್ನು ತಡೆ ಹಿಡಿಯಲಾಗಿದೆ. ಆದರೆ, ಇನ್ನುಳಿದಂತೆ ಸಂತ್ರಸ್ತರಿಗೆ ನೀಡಲಾಗಿರುವ ಚೆಕ್ ಹಣ ಡ್ರಾ ಆಗುತ್ತಿದೆ. ಯಾವುದೇ ಬ್ಯಾಂಕ್ ನಲ್ಲಿ ಹಣ ಇಲ್ಲ ಎಂದು ಕಳುಹಿಸಲು ಸಾಧ್ಯವಿಲ್ಲ. ಒಂದು ವೇಳೆ ಬ್ಯಾಂಕ್ ನವರು ಆ ರೀತಿ ನಡೆದುಕೊಂಡಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಸರಕಾರ ಪ್ರವಾಹ, ಬರ ನಿರ್ವಹಣೆಗೆ ಹಣ ನೀಡಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಸ್ಪಷ್ಟನೆ ನೀಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights