ನೆರೆ ಸಂಬಂಧ ಸಿದ್ದರಾಮಯ್ಯ ಪಾದಯಾತ್ರೆ ಮಾಡುತ್ತಿರೋದು ಮಾಡೋಕೆ ಬೇರೆ ಕೆಲ್ಸವಿಲ್ಲದೆ – ಕಾರಜೋಳ ಲೇವಡಿ

ಸ್ಪೀಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದು ಸಿದ್ದರಾಮಯ್ಯಗೆ ಶೋಭೆ ತರುವುದಿಲ್ಲ. ಸಿದ್ದರಾಮಯ್ಯ ಆ ರೀತಿ ಮಾತನಾಡ್ಬಾರದು ಎಂದು ಸಿದ್ದರಾಮಯ್ಯ ಸ್ಪೀಕರ್ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಗರಂ ಆದ್ರು.

ಸ್ಪೀಕರ್ ಗೆ ಅತ್ಯಂತ ಗೌರವ ಸ್ಥಾನವಿದೆ. ನನಗೆ ತಿಳುವಳಿಕೆ ಬಂದ ನಂತ್ರ ಇಲ್ಲಿಯವರೆಗೆ ಸ್ಪೀಕರ್ ವಿರುದ್ಧ ಯಾರು ಏಕವಚನದಲ್ಲಿ ಮಾತನಾಡಿಲ್ಲ.

ನೆರೆ ಸಂಬಂಧ ಸಿದ್ದರಾಮಯ್ಯ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು,  ಸಿದ್ದರಾಮಯ್ಯ ಪ್ರತಿಪಕ್ಷದ ಸ್ಥಾನದಲ್ಲಿದ್ದಾರೆ. ಅವ್ರಿಗೆ ಈಗ ಮಾಡೋಕೆ ಬೇರೆ ಕೆಲ್ಸವಿಲ್ಲ ಅದ್ಕೆ ಸಿದ್ದರಾಮಯ್ಯ ಪಾದಯಾತ್ರೆಗೆ ಮುಂದಾಗಿದ್ದಾರೆ ಎಂದು ಕಾರಜೋಳ ಲೇವಡಿ ಮಾಡಿದ್ದಾರೆ. ಅದಕ್ಕೆ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಸಿಎಂ ಇದ್ದಾಗ ಬ್ಯೂಸಿಯಿರುತ್ತಿದ್ರು. ವಿಧಾನಸೌಧದಲ್ಲಿ ಕುಳಿತು ಕೆಲ್ಸ ಮಾಡ್ಬೇಕಾಗ್ತಿತ್ತು. ಈಗ ಏನು ಇಲ್ಲವಲ್ಲಾ,ಅದಕ್ಕೆ ಪಾದಯಾತ್ರೆ ಮಾಡ್ತಾರೆ ಮಾಡಲಿ. ಪಾದಯಾತ್ರೆ ಮೂಲಕ ಮತ್ತೆ ಸಿದ್ದರಾಮಯ್ಯ ಸಿಎಂ ಕನಸು, ಪ್ರಯತ್ನ ವಿಚಾರಕ್ಕೆ ಮಾಥನಾಡಿ,  ರಾಜಕಾರಣದಲ್ಲಿರೋರು ಖಾಲಿ ಕುಳಿತುಕೊಳ್ಳಲು ಆಗುವುದಿಲ್ಲ. ನಿರಂತರ ಪ್ರಯತ್ನ ಮಾಡ್ಬೇಕಾಗುತ್ತೇ.

ಸಿಎಂ ಡಿಸಿಯೊಂದಿಗೆ ಐದೇ ನಿಮಿಷದಲ್ಲಿ ಸಂವಾದ, ವಿಚಾರ :-

ಸಂವಾದ ಎಷ್ಟು ನಿಮಿಷ ಮಾಡಿದ್ದೀವಿ ಅನ್ನೋದು ಮುಖ್ಯವಲ್ಲ. ನೆರೆಗೆ ಸಂಬಂಧ ಆಗಸ್ಟ್ ನಿಂದ ಇಲ್ಲಿಯವರೆಗೂ ಸರ್ಕಾರ ಏನು ಮಾಡಿದೆ ಅನ್ನೋದು ಮುಖ್ಯ. ಸಂತ್ರಸ್ತರಿಗೆ ತುರ್ತು ಪರಿಹಾರ ಧನ, ತಾತ್ಕಾಲಿಕ ವ್ಯವಸ್ಥೆ ಮಾಡಿದೆ. ನೆರೆಗೆ ಹಣ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights