ನೆರೆ ಪರಿಹಾರಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ ರೈತ….
ಬಾಗಲಕೋಟೆ ಜಿಲ್ಲೆಯ ಹಂಡರಗಲ್ ಗ್ರಾಮದ ರೈತ ನೆರೆ ಪರಿಹಾರಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಮಡಿವಾಳಯ್ಯ ಗಂಗೂರ, ಪ್ರಧಾನಿಗೆ ಪತ್ರ ಬರೆದ ರೈತ. ಬಾಗಲಕೋಟೆ ಜಿಲ್ಲೆಯಲ್ಲಿ ಉಂಟಾದ ನೆರೆ ಮತ್ತು ಬರದಿಂದಾದ ಹಾನಿಗೆ ಪರಿಹಾರ ನೀಡುವಂತೆ, ನೆರೆಯಿಂದ ಲಕ್ಷಾಂತರ ಜನರ ಬದುಕು ಬೀದಿಗೆ ಬಂದಿದೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಸಾವಿರಾರು ಹಳ್ಳಿಗಳು ಸಹಿತ ದನಕರುಗಳು ಮುಳುಗಿ ಹೋಗಿವೆ. ರಾಜ್ಯದಲ್ಲಿ ಅಪಾರ ಪ್ರಮಾಣದ ಹಾನಿಯಾಗಿ ಸಮಸ್ಯೆ ಕಣ್ಣಿನಲ್ಲಿ ನೋಡಲಾಗುತ್ತಿಲ್ಲ. ಇನ್ನೊಂದಡೆ ಮಳೆಯಾಗದೇ ಬೆಳೆ ಒಣಗಿ ಹೋಗಿ, ಬರದಿಂದ ರೈತನ ಬಾಳು ಸಂಕಷ್ಟಕ್ಕೀಡಾಗಿದೆ. ಅತೀವೃಷ್ಠಿ ಮತ್ತು ಅನಾವೃಷ್ಠಿಯಿಂದ ರಾಜ್ಯದ ಜನರ ನೆರವಿಗೆ ಕೇಂದ್ರ ತಕ್ಷಣ ಸ್ಪಂದಿಸಿ ಪರಿಹಾರ ಘೋಷಿಸಿಬೇಕು ಎಂದು ಪ್ರಧಾನಿ ಮೋದಿಗೆ ಕಳಕಳಿಯ ಪತ್ರ ಬರೆದಿದ್ದಾರೆ ಮಡಿವಾಳಯ್ಯ.