ನೂತನ ಜಿಲ್ಲೆಗೆ ಆಗ್ರಹಿಸಿ ಇಂದು ಜಮಖಂಡಿ ಇಂದು ಬಂದ್ : ನೀರಸ ಪ್ರತಿಕ್ರಿಯೆ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನೂತನ ಜಿಲ್ಲೆಗೆ ಆಗ್ರಹಿಸಿ ಇಂದು ಬಂದ್ ಗೆ ಕರೆ ನೀಡಲಾಗಿದೆ. ಬಾಗಲಕೋಟೆಯ ಜಮಖಂಡಿ ಜಿಲ್ಲಾ ಹೋರಾಟ ಸಮಿತಿಯಿಂದ, ಓಲೇಮಠದ ಡಾ.ಚನ್ನಬಸವ ಸ್ವಾಮೀಜಿಗಳ ನೇತೃತ್ವದಲ್ಲಿ ಮಠಾಧೀಶರಿಂದ ಸಂಪೂರ್ಣ ಬಂದ್ ಮಾಡಲಾಗಿದೆ.

ಬಂದ್ ಗೆ ಸಹಕರಿಸಲು ಸಾವ೯ಜನಿಕರಿಗೆ ಮನವಿ ಈಗಾಗಲೇ ಮಾಡಲಾಗಿತ್ತು. ಇಂದು ಬಂದ್ ಮಾಡಿ ನಾಳೆ ಜಿಲ್ಲೆಗೆ ಆಗಮಿಸೋ ಮುಖ್ಯಮಂತ್ರಿಗಳಿಗೆ ಮನವಿ ನೀಡಲು ನಿಧಾ೯ರ ಮಾಡಲಾಗಿದೆ. ಆದರೆ ಜಮಖಂಡಿ ಬಂದ್ ಕರೆಗೆ ಸದ್ಯ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಸ್ ಸಂಚಾರ ಸ್ಥಗಿತಗೊಂಡರೂ ಶಾಲಾ ಕಾಲೇಜುಗಳು, ಆಟೋ ಸಹಿತ ಖಾಸಗಿ ವಾಹನಗಳ ಓಡಾಟ ಎಂದಿನಂತೆ ಮುಂದುವರೆದಿದೆ. ಮುಂಜಾಗ್ರತಾ ಕ್ರಮವಾಗಿ ಬಸ್ ಸಂಚಾರ ಕೂಡ ಬಂದ್ ಮಾಡಲಾಗಿದ್ದು, ಬೆಳಿಗ್ಗೆ ೧೦ಕ್ಕೆ ಹನುಮಾನ ವೃತ್ತದಿಂದ ದೇಸಾಯಿ ವೃತ್ತದವರೆಗೆ ನಡೆಯಲಿರೋ ಪ್ರತಿಭಟನಾ ಮೆರವಣಿಗೆಯಲ್ಲಿ ಮಠಾಧೀಶರು, ಜನಪ್ರತಿನಿಧಿಗಳು, ಹೋರಾಟಗಾರರ ನೇತೃತ್ವದಲ್ಲಿ ಜಮಖಂಡಿ ನಗರದಲ್ಲಿ ಪಾದಯಾತ್ರೆ ಮಾಡಲಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights