ನಾನು ಬಿಜೆಪಿ ಮುಖಂಡರಿಗೆ ಕೃತಜ್ಞತೆ ಹೇಳಲು ಬಂದಿದ್ದೇನೆ, ಪಕ್ಷ ಸೇರಲು ಅಲ್ಲ – ಸುಮಲತಾ
ನಾನು ಬಿಜೆಪಿ ಕಾರ್ಯಕರ್ತರು ಮುಖಂಡರಿಗೆ ಕೃತಜ್ಞತೆ ಹೇಳಲು ಬಂದಿದ್ದೇನೆ, ಪಕ್ಷ ಸೇರಲು ಅಲ್ಲ ಎಂದು ಮಂಡ್ಯದ ಬಿಜೆಪಿ ಕಚೇರಿಯಲ್ಲಿ ಸಂಸದೆ ಸುಮಲತಾ ಹೇಳಿದ್ದಾರೆ.
ಈ ಮೊದಲೇ ನಾಲ್ಕೈದು ಬಾರಿ ಸಭೆಗೆ ಪ್ರಯತ್ನಿಸಿದ್ದೆ ಆದ್ರೆ ಕಾರಣಾಂತರದಿಂದ ಸಾಧ್ಯವಾಗಲಿಲ್ಲ. ಕಳೆದ ಲೊಕಸಭಾ ಚುನಾವಣೆಯಲ್ಲಿ ನನ್ನ ಪರವಾಗಿ ಬಿಜೆಪಿ ಕೆಲಸ ಮಾಡಿದ್ರು. ಆ ಕಾರಣಕ್ಕಾಗಿ ಬಿಜೆಪಿ ಕಾರ್ಯಕರ್ತರು ಮುಖಂಡರು ನನ್ನ ಪರವಾಗಿ ಕೆಲಸ ಮಾಡಿದ್ರು. ಆ ಕಾರಣದಿಂದ ನಾನು ಅವ್ರಿಗೆ ಕೃತಜ್ಞತೆ ಹೇಳಲು ಬಯಸಿದ್ದೆ ಅದಕ್ಕಾಗಿ ಇವತ್ತು ಇಲ್ಲಿಗೆ ಬಂದಿದ್ದೇನೆ.
ನಾನು ಬಿಜೆಪಿ ಪಕ್ಷ ಸೇರುವುದಾದರೆ ಎಲ್ಲರಿಗೂ ಹೇಳಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ತೇನೆ. ಮುಚ್ಚಿಟ್ಟು ಮರೆಮಾಡಿ ಪಕ್ಷ ಸೇರ್ಪಡೆಯಾಗೋದಿಲ್ಲ. ಕೆ.ಆರ್.ಪೇಟೆ ಉಪ ಚುನಾವಣೆ ಯಲ್ಲಿ ಯಾವ ಪಕ್ಷ ಬೆಂಬಲಿಸೋದನ್ನು ಆ ಕಾಲ ಬಂದಾಗ ನೋಡೋಣ.
ಮಾಜಿ ಸಂಸದ ಶಿವರಾಮೇಗೌಡ ಗೌಡ ಜೋಡೆತ್ತು ಈಗ ಎಲ್ಲಿ ಎಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನೊಬ್ಬಳ್ಳೆ ಸಂಸದೆಯಾಗಿದ್ರು ಅವರ ಪಕ್ಷದ ೭ ಜನ ಶಾಸಕರಾಗಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿಗೆ ಕೇಂದ್ರದಲ್ಲಿ ೩೩೦ ಕ್ಕೂ ಹೆಚ್ಚು ಲೋಕಸಭಾ ಸದಸ್ಯರಿದ್ದಾರೆ, ನನ್ನ ಸೇರ್ಪಡೆ ಅವಶ್ಯಕತೆ ಇಲ್ಲ. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ನಾನು ಬಿಜೆಪಿ ಸಹಕಾರ ಕೇಳ್ತಿನಿ ಅದು ನನಗೆ ಅವಶ್ಯಕ ಎಂದರು.