ನಾನು ಬಿಜೆಪಿ ಮುಖಂಡರಿಗೆ ಕೃತಜ್ಞತೆ ಹೇಳಲು ಬಂದಿದ್ದೇನೆ, ಪಕ್ಷ ಸೇರಲು ಅಲ್ಲ – ಸುಮಲತಾ

ನಾನು ಬಿಜೆಪಿ ಕಾರ್ಯಕರ್ತರು ಮುಖಂಡರಿಗೆ ಕೃತಜ್ಞತೆ ಹೇಳಲು ಬಂದಿದ್ದೇನೆ, ಪಕ್ಷ ಸೇರಲು ಅಲ್ಲ ಎಂದು  ಮಂಡ್ಯದ ಬಿಜೆಪಿ ಕಚೇರಿಯಲ್ಲಿ ಸಂಸದೆ ಸುಮಲತಾ ಹೇಳಿದ್ದಾರೆ.

ಈ ಮೊದಲೇ ನಾಲ್ಕೈದು ಬಾರಿ ಸಭೆಗೆ ಪ್ರಯತ್ನಿಸಿದ್ದೆ ಆದ್ರೆ ಕಾರಣಾಂತರದಿಂದ ಸಾಧ್ಯವಾಗಲಿಲ್ಲ. ಕಳೆದ ಲೊಕಸಭಾ ಚುನಾವಣೆಯಲ್ಲಿ ನನ್ನ ಪರವಾಗಿ ಬಿಜೆಪಿ ಕೆಲಸ ಮಾಡಿದ್ರು. ಆ ಕಾರಣಕ್ಕಾಗಿ ಬಿಜೆಪಿ ಕಾರ್ಯಕರ್ತರು ಮುಖಂಡರು ನನ್ನ ಪರವಾಗಿ ಕೆಲಸ ಮಾಡಿದ್ರು. ಆ ಕಾರಣದಿಂದ ನಾನು ಅವ್ರಿಗೆ ಕೃತಜ್ಞತೆ ಹೇಳಲು ಬಯಸಿದ್ದೆ ಅದಕ್ಕಾಗಿ ಇವತ್ತು ಇಲ್ಲಿಗೆ ಬಂದಿದ್ದೇನೆ.

ನಾನು ಬಿಜೆಪಿ ಪಕ್ಷ ಸೇರುವುದಾದರೆ ಎಲ್ಲರಿಗೂ ಹೇಳಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ತೇನೆ. ಮುಚ್ಚಿಟ್ಟು ಮರೆಮಾಡಿ ಪಕ್ಷ ಸೇರ್ಪಡೆಯಾಗೋದಿಲ್ಲ. ಕೆ.ಆರ್.ಪೇಟೆ ಉಪ ಚುನಾವಣೆ ಯಲ್ಲಿ ಯಾವ ಪಕ್ಷ ಬೆಂಬಲಿಸೋದನ್ನು ಆ ಕಾಲ ಬಂದಾಗ ನೋಡೋಣ.

ಮಾಜಿ ಸಂಸದ ಶಿವರಾಮೇಗೌಡ ಗೌಡ ಜೋಡೆತ್ತು ಈಗ ಎಲ್ಲಿ ಎಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನೊಬ್ಬಳ್ಳೆ ಸಂಸದೆಯಾಗಿದ್ರು ಅವರ ಪಕ್ಷದ ೭ ಜನ ಶಾಸಕರಾಗಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿಗೆ ಕೇಂದ್ರದಲ್ಲಿ ೩೩೦ ಕ್ಕೂ ಹೆಚ್ಚು ಲೋಕಸಭಾ ಸದಸ್ಯರಿದ್ದಾರೆ, ನನ್ನ ಸೇರ್ಪಡೆ ಅವಶ್ಯಕತೆ ಇಲ್ಲ. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ನಾನು ಬಿಜೆಪಿ ಸಹಕಾರ ಕೇಳ್ತಿನಿ ಅದು ನನಗೆ ಅವಶ್ಯಕ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights