ನಾನು ಕೈ ಮುಗಿಯೋದು ನಾಯಕ ಕುಮಾರಣ್ಣನಿಗೆ ಮಾತ್ರ-ಸಾ.ರಾ.ಮಹೇಶ್

ನನ್ನ ಕೊನೆ ಉಸಿರಿರೋವರೆಗೋ ಕೆ.ಆರ್.ನಗರದಲ್ಲೆ ಚುನಾವಣೆ ನಿಲ್ಲೋದು. ನಾನು ಕೈ ಮುಗಿಯೋದು ನಾಯಕ ಕುಮಾರಣ್ಣನಿಗೆ ಮಾತ್ರ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

ಕ್ಷೇತ್ರ ಬದಲಾವಣೆ ವದಂತಿಗೆ ಸ್ಪಷ್ಟನೆ ನೀಡಿದ ಸಾ.ರಾ.ಮಹೇಶ್. ನಾನು ಕ್ಷೇತ್ರ ಬದಲಾವಣೆ ಮಾಡೋ ಪ್ರಶ್ನೆಯೇ ಇಲ್ಲ. ವದಂತಿ ಯಾಕಾಗಿ ಹಬ್ಬಿತೋ ಗೊತ್ತಿಲ್ಲ. ಉಸಿರು ಇರೋವರೆಗು ನಾನು ಕೆ.ಆರ್.ನಗರ ಕ್ಷೇತ್ರದಲ್ಲೆ ಚುನಾವಣೆ ನಿಲ್ತಿನಿ‌. ಕೊನೆವರಗು ಕುಮಾರ‌ಸ್ವಾಮಿಗೆ ಮಾತ್ರ ಕೈ ಮುಗಿತಿನಿ ಎಂದಿದ್ದಾರೆ.

ಮಾಜಿ ಸಿಎಂ ಹೆಚ್‌ಡಿಕೆ ವಿರುದ್ಧ ಇನ್ನಷ್ಟೂ ಚೂರಿಗಳು ಬರುವುದು ಬಾಕಿ ಇದೆ. ಅಲ್ಲಲ್ಲಿ ಚೂರಿಗಳ ಮಾತುಗಳು ಕೇಳುತ್ತಿವೆ. ಅವೆಲ್ಲವು ಶೀಘ್ರದಲ್ಲೇ ಹೊರ ಬರಲಿದೆ. ನಮ್ಮ ಪಕ್ಷದಲ್ಲೇ ಚೂರಿಗಳ ಸದ್ದು ಕೇಳಿಸುತ್ತಿದೆ. ಎಲ್ಲ ಚೂರಿಗಳನ್ನು ಅರಗಿಸಿಕೊಳ್ಳುವ ಶಕ್ತಿ ಕುಮಾರಸ್ವಾಮಿ ಅವರಿಗೆ ಇದೆ.

14 ತಿಂಗಳು ಮುಖ್ಯಮಂತ್ರಿ ಆದ ನಂತರ ಸಿಎಂ ಉಂಡಷ್ಟು ನೋವು ಯಾರು ಉಣ್ಣಲಿಲ್ಲ. ಬೆಳ್ಳಗೆ ಅಧಿಕಾರಿಗಳ ಸಭೆ ಮಾಡಿದರೆ ಮುಗಿತು. ನಂತರವೆಲ್ಲ ಅಸಮಾಧಾನಗೊಂಡ ಶಾಸಕರ ಸಮಾಧಾನದಲ್ಲೇ ಸಮಯ ಕಳೆಯಬೇಕಿತ್ತು. ಹೆಚ್‌ಡಿಕೆ ಅವರ ಜೊತೆಯಲ್ಲೆ ನಾನು ಇದ್ದ ಕಾರಣ ಅವರ ಉಂಡ ಎಲ್ಲ ನೋವುಗಳು ನನಗೆ ಗೊತ್ತು. ಅಧಿಕಾರಿ ಹೋದ ನಂತರದಲ್ಲಿ ಮತ್ತೇ ಆ ನೋವು ಮುಂದುವರೆದಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights