‘ನನ್ನ 14 ತಿಂಗಳ ಸಾಧನೆಯನ್ನು ಪುಸ್ತಕ ಮಾಡಿಸಿ ಪ್ರತಿ ತಾಲೂಕಿಗೂ ಕಳಿಸಿ ಕೊಡ್ತೇನೆ’ ಹೆಚ್.ಡಿ ಕುಮಾರಸ್ವಾಮಿ

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾದ ನಂತರ ಮೈತ್ರಿ ನಾಯಕರ ಆರೋಪ ಪ್ರತ್ಯಾರೋಪ ಜೋರಾಗಿದೆ. ಇಂದು ಕೆ.ಆರ್.ಪೇಟೆಯಲ್ಲಿ ಮಾಜಿ ಸಿ.ಎಂ. ಕುಮಾರಸ್ವಾಮಿ ಮೈತ್ರಿ ನಾಯಕ ಮಾಜಿ ಸಿ.ಎಂ. ಸಿದ್ರಾಮಯ್ಯ ವಿರುದ್ದ ಗುಟುರು ಹಾಕಿದ್ದಾರೆ. ಅಲ್ದೆ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ವಿರುದ್ದ ವಾಗ್ಧಾಳಿ ನಡೆಸಿದ್ರೆ ಮತ್ತೊಮ್ಮೆ ಸಂಸದೆ ಸುಮಲತಾ ಸ್ವಾಭಿಮಾನವನ್ನು ವ್ಯಂಗ್ಯವಾಡಿದ್ದಾರೆ.

ಇಂದು ಕೆ.ಆರ್.ಪೇಟೆಯ ಅಗ್ರಹಾರ ಬಾಚಹಳ್ಳಿ ಗ್ರಾಮದಲ್ಲಿ ನಿಧನರಾಗಿದ್ದ ತಮ್ಮ ಪಕ್ಷದ ಜೆಡಿಎಸ್ ಮುಖಂಡ ತಾಲೂಕು ಜೆಡಿಎಸ್ ಅಧ್ಯಕ್ಷ ವೆಂಕಟಸುಬ್ಬೇಗೌಡರ ಅಂತಿಮ ದರ್ಶನಕ್ಕೆ ಆಗಮಿಸಿ hdk ಅಂತಿಮ ದರ್ಶನ ಪಡೆದು‌ ಅಗಲಿದ ಪಕ್ಷದ ಮುಖಂಡನ ಸಾವಿಗೆ ಕಂಬನಿ ಮಿಡಿದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಬಳಿಕ ಮಾತನಾಡಿದ hdk ವಿಶ್ವಾಸ ದ್ರೋಹ ಯಾರು ಮಾಡಿದ್ದು ಅಂತ ಜನ ತೀರ್ಮಾನ ಮಾಡ್ತಾರೆ. ಸ್ವಾಭಿಮಾನಿಗಳು ಈಗ ಕಬ್ಬು ಕಟಾವು ಮಾಡಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದೆ ಸುಮಲತಾ ವಿರುದ್ಧ ಮಾತಿನ ಚಾಟಿ ಬೀಸಿದರು.

ಅಲ್ದೆ  ನನ್ನ 14 ತಿಂಗಳ ಸಾಧನೆಯನ್ನು ಪುಸ್ತಕ ಮಾಡಿಸಿ ಪ್ರತೀ ರಾಜ್ಯದ ತಾಲೂಕಿಗೂ ಕಳಿಸಿಕೊಡ್ತೇನೆ. ನಾನು ಸಾಲ ಮನ್ನಾ ಮಾಡಿದರೆ ಪ್ರಯೋಜನವಿಲ್ಲ, ಆದರೆ ಸಿದ್ಧರಾಮಯ್ಯ ಸಾಲ ಮಾಡಿದ್ದು ರೈತರಿಗೆ ಪ್ರಯೋಜನವಾಯ್ತು ಅಂತ ಕೆ.ಆರ್.ಪೇಟೆ ಕಾಂಗ್ರೆಸ್ ಮಾಜಿ ಶಾಸಕ ಹೇಳ್ತಾರೆ. ಅದೇನೋ ಸ್ವಾಭಿಮಾನವಂತೆ. ಸ್ವಾಭಿಮಾನ ಏನು ಅನ್ನೋದನ್ನ ತೋರಿಸಿ ಕೊಟ್ಟವರಂತೆ ಈಗ ಬೆಳೆದು ನಿಂತಿರುವ ಕಬ್ಬು ಅರೆಸಲಿ ಅಂತಾ ಮಾಜಿ ಶಾಸಕ ಚಂದ್ರಶೇಖರ್ ಮತ್ತು‌ ಸಂಸದೆ ಸುಮಲತಾಗೆ ಸವಾಲು ಹಾಕಿದರು. ಸಿದ್ಧರಾಮಯ್ಯ ಮಾಡಿದ ವಿಶ್ವಾಸ ದ್ರೋಹದ ಬಗ್ಗೆ ರಾಜ್ಯದ ಜನತೆ ತೀರ್ಮಾನ ಮಾಡ್ತಾರೆ ಬಿಡಿ, ನಾನೇಕೆ ಮಾತಾಡಿ ನನ್ನ ಬಾಯನ್ನು ಹೊಲಸು ಮಾಡಿಕೊಳ್ಳಲಿ ಎಂದು ಮಾಜಿ‌ ಸಿದ್ರಮಾಯ್ಯ ವಿರುದ್ದ ಕಿಡಿಕಾರಿ ಕೆ.ಆರ್.ಪೇಟೆ ತಾಲ್ಲೂಕು ಒಂದಕ್ಕೆ 12ಸಾವಿರ ರೈತ ಕುಟುಂಬಗಳಿಗೆ 92ಕೋಟಿಗೂ ಹೆಚ್ಚು ಸಾಲ ಮನ್ನಾ ಆಗಿದೆ. ಮತ್ತೆ ಬರ್ತೀನಿ ಸಾವಿನ ಮನೆಯಲ್ಲಿ ರಾಜಕಾರಣ ಮಾಡೋದು ಬೇಡ ಎಂದ್ರು.ಇದೇ ಸಂದರ್ಭದಲ್ಲಿ ಜೆಡಿಎಸ್ ಅನರ್ಹ ಶಾಸಕ ನಾರಾಯಣಗೌಡರ ಬಗ್ಗೆ ಕ್ಷೇತ್ರದ ಕಾರ್ಯಕರ್ತರು ದೂರಿನ ಸುರಿಮಳೆಗೈದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights